Advertisement

ಕಿಡ್ನಿ ತೊಂದರೆ: ಚಿಕಿತ್ಸೆಗೆ ನೆರವು ನೀಡಲು ಮನವಿ

03:10 PM Nov 02, 2018 | |

ಬೆಳ್ಳಾರೆ : ಬೆಳ್ಳಾರೆ ಗ್ರಾಮದ ಮೊಗಪ್ಪೆ ನಿವಾಸಿ ಕೃಷ್ಣ ಮಣಿಯಾಣಿ ಅವರ ಪುತ್ರ ಮನೋಜ್‌ ಕುಮಾರ್‌ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ವೆಚ್ಚ ಭರಿಸಲಾಗದೆ ಮನೆಮಂದಿ ಸಾರ್ವಜನಿಕರಿಂದ ಸಹಾಯ ಯಾಚಿಸಿದ್ದಾರೆ. ಸೆಂಟ್ರಿಂಗ್‌ ಕೆಲಸವನ್ನು ಮಾಡಿ ಕೊಂಡಿದ್ದು, ಏಕಾಏಕಿಯಾಗಿ ಹೊಟ್ಟೆ ನೋವು ಕಂಡುಬಂದಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಕಳೆದೆರಡು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇದ್ದಾರೆ. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಮನೋಜ್‌ ಕುಮಾರ್‌ ಅವರಿಗೆ ಕಿಡ್ನಿಯಲ್ಲಿ ಗಂಭೀರ ಸ್ವರೂಪದ ಸಮಸ್ಯೆ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಮನೋಜ್‌ ಕುಮಾರ್‌ ಅವರ ತಂದೆ ಚಿಕಿತ್ಸೆಗೆ 5 ಲಕ್ಷ ರೂ.ಗಳಷ್ಟು ಸಾಲ ಮಾಡಿದ್ದಾರೆ. ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ದಿಕ್ಕು ತೋಚದಂತಿದ್ದಾರೆ. ಕಡುಬಡತನದ ಕುಟುಂಬದ ಹಿನ್ನೆಲೆಯುಳ್ಳ ಮನೋಜ್‌ ಕುಮಾರ್‌ ಕುಟುಂಬವು ಸಾರ್ವಜನಿಕರ ಸಹಾಯ ಹಸ್ತಕ್ಕೆ ಮೊರೆ ಇಟ್ಟಿದ್ದಾರೆ.

ಖಾತೆಗೆ ಜಮೆ ಮಾಡಿ
ದಾನಿಗಳು ಮನೋಜ್‌ ಕುಮಾರ್‌ ಅವರ ಪತ್ನಿ ಈಶ್ವರಿ ಪಿ. ಅವರ ಸಿಂಡಿಕೇಟ್‌ ಬ್ಯಾಂಕ್‌ ಖಾತೆ ನಂಬರ್‌ 01762200035572. ಐಎಫ್ಎಸ್‌ ಕೋಡ್‌ ಎಸ್‌ವೈಎನ್‌ಬಿ0000176 – ಇಲ್ಲಿಗೆ ಪಾವತಿಸಲು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next