Advertisement

ಕಿಡ್ನಿ ವೈಫ‌ಲ್ಯ: ನೆರವು ಕೋರಿಕೆ

11:52 AM Feb 06, 2017 | |

ಬೆಂಗಳೂರು: ಕಳೆದ ಎಂಟು ತಿಂಗಳಿಂದ ಎರಡು ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿರುವ ನಗರದ ಪಲ್ಲವಿ (14) ಎಂಬ ಬಾಲಕಿಯ ಚಿಕಿತ್ಸೆಗಾಗಿ ಪೋಷಕರು ಆರ್ಥಿಕ ನೆರವು ಕೋರಿದ್ದಾರೆ.ಮಾಗಡಿ ಮುಖ್ಯರಸ್ತೆ ದೊಡ್ಡಗೊಲ್ಲರಹಟ್ಟಿಯ ವಿಜಯಕುಮಾರಿ ಎಂಬುವರ ಪುತ್ರಿ ಪಲ್ಲವಿ ಎಂಬ ಬಾಲಕಿಯ ಎರಡೂ ಕಿಡ್ನಿಗಳು ವೈಫ‌ಲ್ಯಗೊಂಡಿವೆ.

Advertisement

ಮೂಲತಃ ಮಾಗಡಿ ತಾಲೂಕಿನ ವಿಜಯಕುಮಾರಿ ಅವರ ಪತಿ ರುದ್ರಕುಮಾರ್‌ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.ತಮ್ಮದು ತೀರಾ ಬಡ ಕುಟುಂಬವಾಗಿದ್ದು, ಮಗಳು ಎರಡು ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿದ್ದಾಳೆ. ಕಿಡ್ನಿ ಕಸಿಗೆ ಲಕ್ಷಾಂತರ ರೂ.ವೆಚ್ಚವಾಗಲಿದೆ. ಕಿಡ್ನಿ ನೀಡಲು ತಾನು ತಯಾರಿದ್ದು, ಚಿಕಿತ್ಸೆಗೆ ಬೇಕಾದ ಹಣ ಹೊಂದಿಸಲು ಸಾಧ್ಯವಾಗದೆ ಏಳೆಂಟು ತಿಂಗಳಿಂದ ಕಷ್ಟಪಡುತ್ತಿದ್ದೇನೆ.

ದಾನಿಗಳು ಮಗಳ ಚಿಕಿತ್ಸಾ ವೆಚ್ಚಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ. ಸಹಾಯ ನೀಡುವವರು ಮಾಗಡಿ ಮುಖ್ಯರಸ್ತೆ, ಅಂಜನಾನಗರ, ಭಾರತೀಯ ಸ್ಟೇಟ್‌ ಬ್ಯಾಂಕ್‌ ಖಾತೆ 33343472232 ಖಾತೆಗೆ ಜಮೆ ಮಾಡಬಹುದು. ಮೊ: 9900208707 ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next