Advertisement

Arrested: ಸಂತ್ರಸ್ತೆ ಅಪಹರಣ ಪ್ರಕರಣ: ಮತ್ತೆ ಐವರ ಬಂಧನ

10:34 PM May 09, 2024 | Team Udayavani |

ಕೆ.ಆರ್‌.ನಗರ:  ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಲು ಸಹಕಾರ ನೀಡಿದ ಆರೋಪದಡಿ ಎಸ್‌ಐಟಿ ಪೊಲೀಸರು ತಾಲೂಕಿನ ಐವರನ್ನು ಬಂಧಿಸಿದ್ದಾರೆ.

Advertisement

ತಾಲೂಕು ಯುವ ಜೆಡಿಎಸ್‌ ಮಾಜಿ ಅಧ್ಯಕ್ಷ ಎಚ್‌.ಕೆ.ಸುಜಯ್‌, ಹೆಬ್ಟಾಳು ಗ್ರಾಪಂ ಸದಸ್ಯ ಎಚ್‌.ಡಿ.ಮನುಗೌಡ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್‌.ಟಿ.ಕೀರ್ತಿ, ವಕೀಲ ಅಂಕನಹಳ್ಳಿ ತಿಮ್ಮಪ್ಪ ಮತ್ತು ಜೆಡಿಎಸ್‌ ಮುಖಂಡ ಕಪ್ಪಡಿ ಮಧು ಬಂಧಿತರು.

ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಸುವ ಬೆದರಿಕೆ: ಎಚ್‌ಡಿಕೆ: 

ಬೆಂಗಳೂರು: ಸರಕಾರಕ್ಕೆ ಅನುಕೂಲ ಆಗುವ ರೀತಿಯಲ್ಲಿ ಹೇಳಿಕೆ ನೀಡದಿದ್ದರೆ, ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು  ನೊಂದ ಮಹಿಳೆಯರಿಗೆ ಎಸ್‌ಐಟಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next