Advertisement

ಮತ್ತೂಬ್ಬ ಯುವಕನ ಕಿಡ್ನಾಪ್‌:  ನಾಲ್ಕು ದಿನಗಳಲ್ಲಿ 11ನೇ ಪ್ರಕರಣ

09:34 AM Nov 19, 2018 | Harsha Rao |

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಬಗ್ಗೆ ಸೇನೆಗೆ ಮಾಹಿತಿ ನೀಡಿದರು ಎಂಬ ಆರೋಪದ ಮೇಲೆ ಇಬ್ಬರು ಯುವಕರನ್ನು ಅಪಹರಿಸಿಕೊಂದ ಉಗ್ರರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಶೋಪಿಯಾನ್‌ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಮತ್ತೂಬ್ಬ ಯುವಕನನ್ನು ಭಯೋತ್ಪಾದಕರು ಅಪಹರಿಸಿದ್ದಾರೆ. 19 ವರ್ಷದ ಸುಹೈಲ್‌ ಅಹ್ಮದ್‌ ಎಂಬಾತನೇ ಅಪಹೃತಗೊಂಡ ಯುವಕ. ಈತನ ಜೊತೆಗೆ ಇನ್ನಿಬ್ಬರು ನಾಗರಿಕರನ್ನೂ ಅಪಹರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಅದರ ಸತ್ಯಾಸತ್ಯತೆ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಳೆದ 4 ದಿನಗಳಲ್ಲಿ ನಡೆದ 11ನೇ ಅಪಹರಣ ಪ್ರಕರಣ ಇದಾಗಿದೆ. ಗುರುವಾರ ಯುವಕನೊಬ್ಬನನ್ನು ಉಗ್ರರು ಅಪಹರಿಸಿ, ಗುಂಡಿಕ್ಕಿ ಸಾಯಿಸಿದ್ದರು. ಶನಿವಾರವೂ ಇಂಥದ್ದೇ ಪ್ರಕರಣ ನಡೆದಿತ್ತು. ಇದರ ಬೆನ್ನಲ್ಲೇ ಭಾನುವಾರ ಮತ್ತೂಬ್ಬನ ಅಪ ಹರಣ ನಡೆದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಮಹಿಳೆಯ ಬಂಧನ: ಏತನ್ಮಧ್ಯೆ, ಫೇಸ್‌ಬುಕ್‌ನಲ್ಲಿ ಯುವಕರನ್ನು ಜೈಶ್‌ ಉಗ್ರ ಸಂಘಟನೆಗೆ ಸೇರುವಂತೆ ಪುಸಲಾಯಿಸುತ್ತಿದ್ದ ಶಾಜಿಯಾ ಎಂಬ ಮಹಿಳೆಯನ್ನು ಭದ್ರತಾ ಪಡೆ ಶ್ರೀನಗರದಲ್ಲಿ ಬಂಧಿಸಿದೆ. ಅನಂತ್‌ನಾಗ್‌ನ ಇಬ್ಬರು ಯುವಕರಿಗೆ ತಾನು ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿರುವುದಾಗಿಯೂ ಆಕೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ.

ಇಬ್ಬರು ಉಗ್ರರ ಹತ್ಯೆ: ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅಲ್‌-ಬದ್ರ್ ಉಗ್ರ ಸಂಘ ಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next