Advertisement

ಮಾನವೀಯತೆ ಮೆರೆದ ಮಾಣಿಕ್ಯ: ಕ್ಯಾನ್ಸರ್‌ ಪೀಡಿತೆ ಬಾಲಕಿ ಭೇಟಿಯಾಗಿ ʼಆಟೋಗ್ರಾಫ್ʼಕೊಟ್ಟ ಕಿಚ್ಚ

05:29 PM Jul 05, 2023 | Team Udayavani |

ಬೆಂಗಳೂರು: ಸ್ಯಾಂಡಲ್‌ ವುಡ್ ನ ಬಾದ್‌ ಷಾ ನಟ ಕಿಚ್ಚ ಸುದೀಪ್‌ ಅವರ 46ನೇ ಚಿತ್ರದ ಟೀಸರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಈ ಸಿನಿಮಾದ ಟೀಸರ್‌ ಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಕಿಚ್ಚ ಸುದೀಪ್‌ ಅವರದು ಸರಳ ವ್ಯಕ್ತಿತ್ವ ಹಾಗೂ ಮಾನವೀಯ ಹೃದಯವಂತಿಕೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ 9 ವರ್ಷದ ಬಾಲಕಿಯ ಜೀವನದ ಮಹದಾಸೆಯನ್ನು ಕಿಚ್ಚ ಅವರು ನೆರವೇರಿಸಿದ್ದಾರೆ.

ಸಾಕ್ಷಿ ಎಂಬ ಬಾಲಕಿ ʼಮಾಣಿಕ್ಯʼನ ಅಪ್ಪಟ ಅಭಿಮಾನಿ. ಕಿಚ್ಚನ ಸಿನಿಮಾವನ್ನು ನೋಡುತ್ತಾ,ಹಾಡುಗಳನ್ನು ಕೇಳುತ್ತಾ ಬೆಳದಾಕೆಯ ಜೀವಕ್ಕೆ ಕ್ಯಾನ್ಸರ್‌ ಎಂಬ ಕಾಯಿಲೆ ತುತ್ತಾಗಿ ಅವಳೀಗ ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಜೀವನದಲ್ಲಿ ಒಮ್ಮೆಯಾದರೂ ತನ್ನ ಲೈಫ್‌ ನ ಸೂಪರ್ ಸ್ಟಾರ್‌ ಕಿಚ್ಚ ಸುದೀಪ್‌ ಅವರನ್ನು ಭೇಟಿ ಆಗಬೇಕೆನ್ನುವುದೇ ಸಾಕ್ಷಿ ಅವರ ಮಹಾನ್‌ ಆಸೆಗಳಲ್ಲಿ ಒಂದಾಗಿತ್ತು.

ಅದರಂತೆ ಈ ಬಗ್ಗೆ ತಿಳಿದುಕೊಂಡ ನಟ ಸುದೀಪ್‌ ಅವರು ಸ್ವತಃ ತಾವೇ ಆಸ್ಪತ್ರೆಗೆ ಭೇಟಿ ಕೊಟ್ಟು ಬಾಲಕಿ ಜೊತೆ ಒಂದಷ್ಟು ಸಮಯವನ್ನು ಕಳೆದು ಆಕೆಗೆ ಆಟೋಗ್ರಾಫ್‌ ಕೊಟ್ಟು ಧೈರ್ಯ ತುಂಬಿದ್ದಾರೆ. ಹಾಗೂ ಬಾಲಕಿ ಸಾಕ್ಷಿ ಕುಟುಂಬದವರಿಗೆ ಧೈರ್ಯವಾಗಿ ಇರುವಂತೆ ಹೇಳಿದ್ದಾರೆ.

ತನ್ನ ಬ್ಯುಸಿ ಶೆಡ್ಯೂಲ್‌ ನಲ್ಲಿ ಪುಟ್ಟ ಅಭಿಮಾನಿಗಾಗಿ ಸಮಯವನ್ನು ಮೀಸಲಿಟ್ಟು ಆಸ್ಪತ್ರೆಗೆ ಬಂದು ಭೇಟಿ ನೀಡಿದ ಸುದೀಪ್‌ ಅವರ ಫೋಟೋ, ವಿಡಿಯೋಗಳು ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಕಿಚ್ಚನ ʼಮಾನವೀಯತೆʼಗೆ ಸೆಲ್ಯೂಟ್‌ ಮಾಡಿದ್ದಾರೆ.‌ ಕಿಚ್ಚನ ಭೇಟಿಯ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next