Advertisement

ಶಾಲೆ ಮಕ್ಕಳ ಕಲಿಕೆಗೆ ನಟ ಸುದೀಪ ನೆರವು

11:21 AM Mar 18, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆ ರಾಮನಗರದ ಹರಿಜನ ಹೆಣ್ಣು ಮಕ್ಕಳ ಪ್ರಾಥಮಿಕ ಅನುದಾನಿತಶಾಲೆಯ ಮಕ್ಕಳ ಕಲಿಕೆಗೆ ಯಾವುದೇ ರೀತಿ ಅಡಚಣೆಯಾಗದಂತೆ ಎಲ್ಲ ರೀತಿಯ ನೆರವು, ಬೆಂಬಲ ನೀಡಲಾಗುವುದು ಎಂದು ಕಿಚ್ಚ ಸುದೀಪ ಚಾರಿಟೇಬಲ್‌ ಸೊಸೈಟಿಯ ಅಧ್ಯಕ್ಷ ರಮೇಶ ಕಿಟ್ಟಿಹೇಳಿದರು.

Advertisement

ಬುಧವಾರ ಶಾಲೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಈ ಶಾಲೆ ತೆರವುಗೊಳಿಸಿದ ಬಗ್ಗೆ ಹಾಗೂ ಶಾಲೆಯ ವಿದ್ಯಾರ್ಥಿಗಳು ಕಣ್ಣೀರಿಡುತ್ತಿರುವುದನ್ನು ನಟ ಸುದೀಪ ಮಾಧ್ಯಮಗಳಲ್ಲಿ ನೋಡಿ, ಪ್ರತಿಯೊಬ್ಬರಿಗೂ ಕಲಿಯುವ ಹಕ್ಕಿದೆ. ಈ ಶಾಲೆಯ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದೆಂದು ಇಲ್ಲಿಗೆಕಳುಹಿಸಿದ್ದಾರೆ. ಶಾಲೆಯ ಜಾಗ ವಿಷಯವಾಗಿ ಕಾನೂನಾತ್ಮಕ ಹೋರಾಟ ನಡೆದಿದೆ. ಶಾಲೆಯ ಆಡಳಿತ ಮಂಡಳಿಯವರ ಕಾನೂನು ಹೋರಾಟಕ್ಕೆ ಬೆಂಬಲವಾಗಿರುತ್ತೇವೆ. ಒಂದು ವೇಳೆ ಅವರು ಮುಂದಿನ ಎರಡು ತಿಂಗಳ ಅವಧಿಗಾಗಿ ಬೇರೆ ಕಟ್ಟಡದಲ್ಲಿ ಶಾಲೆ ನಡೆಸಲು ಮುಂದಾದರೆ ಅದಕ್ಕೆಬಾಡಿಗೆ ನೀಡಲಾಗುವುದು. ಶಾಲೆಯ ಶಾಶ್ವತಪರಿಹಾರಕ್ಕಾಗಿ ಪರ್ಯಾಯ ವ್ಯವಸ್ಥೆ ಸೇರಿಎಲ್ಲ ರೀತಿಯ ಸಹಾಯ-ಸಹಕಾರ ಹಾಗೂ ಬೆಂಬಲವಾಗಿರುತ್ತೇವೆ ಎಂದರು.

ಶಾಲೆಯ ಆಡಳಿತ ಮಂಡಳಿ ಸಂಸ್ಥಾಪಕಆನಂದ ಪಿಳ್ಳೆ, ಉಪಾಧ್ಯಕ್ಷೆ ರೈಚಿಲ್‌ ಪ್ರಕಾಶ,ಸದಸ್ಯ ಚಂದ್ರಕಾಂತ ಯಾದವ, ಸುನಿಲ ಸಾಂಡ್ರಾ ಮಾತನಾಡಿದರು.ಸೊಸೈಟಿಯ ನಿರ್ದೇಶಕರಾದ ನಾಗೇಂದ್ರ,ಪುಟ್ಟರಾಜ, ಬಿಇಒ ಶ್ರೀಶೈಲ ಕರೀಕಟ್ಟಿ, ಬಿಆರ್‌ಸಿ ಸಂಯೋಜಕ ಎಂ.ಎಸ್‌. ಶಿವಳ್ಳಿಮಠ, ಎಇಸಿಒ ಡಿ. ಲೋಕೇಶ, ಶಾಲೆಯ ಆಡಳಿತಮಂಡಳಿ ಅಧ್ಯಕ್ಷ ಅಂಥೋನಿ ಪ್ರಾನ್ಸಿಸ್‌, ಹಳೇವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು, ಶಾಲೆಯಮುಖ್ಯೋಪಾಧ್ಯಾಯ ವೀರಪ್ಪ ಹಂಚಿನಮನಿ, ಶಿಕ್ಷಕರು, ವಿದ್ಯಾರ್ಥಿಗಳು, ಅವರ ಪಾಲಕರು,ನಿವಾಸಿಗಳು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next