Advertisement

ಖಾಜಿಬೂದಿಹಾಳ: ಅವಿರೋಧ ಆಯ್ಕೆ

05:34 PM Dec 23, 2020 | Suhan S |

ಬಾಗಲಕೋಟೆ: ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮ ಪಂಚಾಯತ ವ್ಯಾಪಿಯ ಖಾಜಿಬೂದಿಹಾಳದ ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿವೆ.

Advertisement

ಖಾಜಿಬುದಿಹಾಳ ಗ್ರಾಮದ ಸಾಮಾನ್ಯ ಕ್ಷೇತ್ರಕ್ಕೆ ಸೈಯದ ಸಲೀಮ ಮಹಬೂಬಸಾಬ ಖಾಜಿ, ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಶೋಭಾ ಗುಂಡಯ್ಯ ಹಿರೇಮಠ, ಹಿಂದುಳಿದ ಅ ವರ್ಗಮಹಿಳೆ ಕ್ಷೇತ್ರಕ್ಕೆ ರುದ್ರಮ್ಮ ಬಸಪ್ಪ  ಕಟಗೇರಿ ಅವರು ನಾಮ ಪತ್ರ ಸಲ್ಲಿಸಿದ್ದು, ಅವರ ಹೊರತು ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

ಖಾಜಿಬೂದಿಹಾಳದ ಹಿಂದು- ಮುಸ್ಲಿಂ ಸಮಾಜದ ಗುರು-ಹಿರಿಯರು ಕೂಡಿಕೊಂಡು ಗ್ರಾಮದ ಮೂವರುಸದಸ್ಯರನ್ನು ಅವಿರೋಧ ಆಯ್ಕೆ ಮಾಡುವ ಮೂಲಕ ಭಾವೈಕ್ಯತೆ ಮರೆದಿದ್ದಾರೆ. ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್‌ ಖಾಜಿ ನೇತೃತ್ವದಲ್ಲಿ ಲಿಂಗಾಯತ ಸಮಾಜದ ಹಿರಿಯರಾದ ಶಿವಪುತ್ರಪ್ಪ ಸಾಲಗುಂದಿ, ಬಮ್ಮಪ್ಪ ರಂಗಣ್ಣವರ,ಪಂಚಪ್ಪ ರಂಗಣ್ಣವರ, ಶಂಕ್ರಪ್ಪಣ್ಣಕಟಗೇರಿ, ಶೇಖಪ್ಪ ಸಾಲಗುಂದಿ, ದುಂಡಯ್ಯ ಹಿರೇಮಠ, ರಮೇಶಕರ್ಕಿಕಟ್ಟಿ, ಮಹಾಗುಂಡಪ್ಪ ಜೆಂಡೇದ ಭೀಮಪ್ಪ ನರಸಾಪುರ ಹಾಗೂ ಮುಸ್ಲಿಂ ಸಮಾಜ ಹಿರಿಯರಾದ ಮೌಲಾನಾ ಶಬ್ಬೀರ ಅಹ್ಮದ ಖಾಜಿ, ರಜಾಕಸಾಬ ಖಾಜಿ, ಸೈಯದಮಹ್ಮದಇನಾಂದಾರ, ಶರೀಫಸಾಬ ಖಾಜಿ, ಆಶೀಫ್‌ ಖಾಜಿ, ಹಾಶಾಮಸಾಬಖಾಜಿ, ಬಾಷಾ ಖಾಜಿ, ನಿಸಾರಅಹ್ಮದ ಖಾಜಿ, ಅಸ್ಲಂ ಮಹಬೂಬಸಾಬ ಖಾಜಿಒಳಗೊಂಡಂತೆ ಹಿಂದೂ ಮುಸ್ಲಿಂ ಸಮಾಜದ ಸಮಸ್ತ ಗುರು-ಹಿರಿಯರ ಉಪಸ್ಥಿತಿಯಲ್ಲಿ ಒಮ್ಮತದ ಗ್ರಾಮ ಪಂಚಾಯತ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next