Advertisement

ಖರ್ಗೆ ಜೂನ್‌ನಲ್ಲಿ ರಾಜ್ಯಸಭೆ ಸದಸ್ಯ ಖಚಿತ: ಸಾರಂಗಧರ ಶ್ರೀ

10:51 PM Mar 02, 2020 | Team Udayavani |

ಕಲಬುರಗಿ: ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹತ್ತು ಶಾಸಕರ ರಾಜೀನಾಮೆ ಕೊಡಿಸುತ್ತೇನೆಂದು ಹೇಳಿಕೆ ನೀಡಿದ್ದ ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಈಗ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಗಳಿದ ವಿಡಿಯೋ ವೈರಲ್‌ ಆಗಿದೆ.

Advertisement

ಕೆಲ ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದ ರಲ್ಲಿ ಖರ್ಗೆ ಪರ ಸ್ವಾಮೀಜಿ ಮಾತನಾಡಿದ್ದು, ಖರ್ಗೆ 50 ವರ್ಷ ಸೇವೆ ಮಾಡಿದರು, ಸರ್ಕಸ್‌ ಮಾಡಲಿಲ್ಲ. ಸರ್ವೀಸ್‌ ಮಾಡಿದವರನ್ನು ಈ ಭಾಗದ ಜನರು ಕೆಡವಿದರು. ಮಾತಿಗೆ ಮರಳಾಗಿ ಚುನಾವಣೆಯಲ್ಲಿ ಖರ್ಗೆ ಅವರನ್ನು ಸೋಲಿಸಿದರು. ಅಂಬೇಡ್ಕರ್‌ಗೆ ಎಷ್ಟು ನೋವಾಗಿತ್ತೋ, ಅಷ್ಟೇ ನೋವು ಮಲ್ಲಿ ಕಾರ್ಜುನ ಖರ್ಗೆಗೆ ಆಗಿದೆ. ಜೂನ್‌ ನಲ್ಲಿ ಖರ್ಗೆ ರಾಜ್ಯಸಭಾ ಸದಸ್ಯರಾಗುತ್ತಾರೆಂದು ಸ್ವಾಮೀಜಿ ವಿಡಿಯೋದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next