Advertisement

ಖಾನಾಪೂರ: ಡ್ಯಾಂ ಕ್ರಾಸ್‌ ಬಳಿ ಒಂಟಿ ಸಲಗ ಪ್ರತ್ಯಕ್ಷ

05:59 PM May 15, 2023 | Team Udayavani |

ಉಳ್ಳಾಗಡ್ಡಿ-ಖಾನಾಪೂರ: ಸಮೀಪದ ಹಿಡಕಲ್‌ ಡ್ಯಾಂ ಕ್ರಾಸ್‌ ಬಳಿಯ ಬಾಲಾಜಿ ವೇ ಬ್ರಿಡ್ಜ್, ಉಳ್ಳಾಗಡ್ಡಿ-ಖಾನಾಪೂರ
ಗ್ರಾಮದ ಅವಟೆ ಹೊಲ-ಗದ್ದೆಗಳಲ್ಲಿ ರವಿವಾರ ಒಂಟಿ ಸಲಗ ಕಾಣಿಸಿದ್ದು, 7-8 ಗಂಟೆ ಕಾಲ ಅತ್ತಿತ್ತ ಅಡ್ಡಾಡಿ ಮತ್ತೆ ಕಾಡಿನತ್ತ ಮುಖ ಮಾಡಿದ ಘಟನೆ ನಡೆದಿದೆ,

Advertisement

ರಾತ್ರಿ ಬಂದ ಗಂಡಾನೆ:-ಬಹುತೇಕ ಮಹಾರಾಷ್ಟ್ರದ ಅರಣ್ಯ ಪ್ರದೇಶದಿಂದ ಕರ್ನಾಟಕದ ಘಟಪ್ರಭಾ ನದಿ ದಡಗುಂಟ ಹತ್ತರಗಿ ಹಾಗೂ ಉಳ್ಳಾಗಡ್ಡಿ-ಖಾನಾಪೂರ ಗುಡ್ಡಗಾಡು ಪ್ರದೇಶಕ್ಕೆ ಬಂದ ಗಂಡಾನೆ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳು ಹಾಗೂ
ಜನ ಸಂಚಾರ ಕಂಡು ನಿಂತಿದೆ.

ಆನೆ ನೋಡಲು ಜನ ಎಲ್ಲೆಡೆಯಿಂದ ಬರುತ್ತಿದ್ದರಿಂದ ಏನೂ ಮಾಡಲು ತೋಚದ ಆನೆ ಒಂದೇ ಸ್ಥಳದಲ್ಲಿ ಸುತ್ತಾಡುತ್ತಿತ್ತು. ಜನಜಾತ್ರೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕೆಲಕಾಲ ತಲೆನೋವಾಗಿ ಪರಿಣಮಿಸಿತ್ತು. ಹೆದ್ದಾರಿ ಮೇಲೆ ಹೋಗುತ್ತಿದ್ದವರು ಕೂಡ ವಾಹನ ನಿಲ್ಲಿಸಿ ಆನೆ ನೋಡುವುದು ವಿಪರೀತವಾಗಿತ್ತು,

ನಂತರ ಅರಣ್ಯ ಇಲಾಖೆ ಸಿಬ್ಬಮದಿ ಪ್ರಯತ್ನದಿಂದ ಬಂದ ದಾರಿಯಲ್ಲೇ ಆನೆ ಬೆಳಗ್ಗೆ 11 ನಂತರ ಮಹಾರಾಷ್ಟ್ರದ ತೆರಣಿ
ಮಾರ್ಗವಾಗಿ ಕಾಡಿನತ್ತ ಹೆಜ್ಜೆ ಹಾಕಿತು. ಆರ್‌ಎಫ್‌ಒ ಪ್ರಶಾಂತ ಬೆಲ್ಲದ, ಡಿಆರ್‌ಎಫ್‌ಒ ವಿರೇಶ ಆಂದೋಲಿ, ಅರಣ್ಯ ರಕ್ಷಕರಾದ
ರಮೇಶ ಕಮತೆ, ಈರಣ್ಣಾ ಜಿಂಡ್ರಾಳಿ, ಅನಿಲ ತಳವಾರ, ನೀಲೇಶ ಕಾಂಬಳೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next