Advertisement

ಅತ್ತ ಕೆಜಿಎಫ್-2 ಫೈಟ್‌, ಇತ್ತ ಸಲಾರ್‌ ಆಡಿಷನ್‌! ಪ್ರಶಾಂತ್‌ ನೀಲ್‌ ಫ‌ುಲ್‌ ಬಿಝಿ

10:54 AM Dec 10, 2020 | sudhir |

ಪ್ರಶಾಂತ್‌ ನೀಲ್‌ ನಿರ್ದೇಶಿಸುತ್ತಿರುವ ಬಹುಭಾಷಾ ಚಿತ್ರ “ಸಲಾರ್‌’ನ ಪೂರ್ವಭಾವಿ ತಯಾರಿ ಜೋರಾಗಿ ನಡೆಯುತ್ತಿದೆ. ಮೊದಲ ಹಂತವಾಗಿ ಚಿತ್ರತಂಡ ಕಲಾವಿದರ ಆಯ್ಕೆಗೆ ಆಡಿಷನ್‌ ಕರೆದಿದೆ. ಈ ಕುರಿತು ಟ್ವೀಟ್‌ ಮಾಡಿರುವ ನಿರ್ದೇಶಕ ಪ್ರಶಾಂತ್‌ ನೀಲ್‌, ಸಿನಿಮಾದಲ್ಲಿ ನಟಿಸಲು ಆಸಕ್ತಿ ಇರುವವರು ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂದಿದ್ದಾರೆ. ಮೊದಲ ಹಂತದ ಆಡಿಷನ್‌ ಹೈದರಾಬಾದ್‌ನಲ್ಲಿ ನಡೆಯಲಿದೆ. ಯಾವುದೇ ಭಾಷೆಯಲ್ಲಾದರೂ ಒಂದು ನಿಮಿಷದ ವಿಡಿಯೋ ಮಾಡಿ ಅದನ್ನು
ಕಳುಹಿಸಿಕೊಡಬಹುದು.

Advertisement

ಡಿಸೆಂಬರ್‌15ರಿಂದ ಬೆಳಗ್ಗೆ 9ರಿಂದ ಸಂಜೆ6 ಗಂಟೆವರೆಗೆ ಆಡಿಷನ್‌ ನಡೆಯಲಿದೆ. ಇದು ಹೈದರಾಬಾದ್‌ ಆಡಿಷನ್‌ ಆದರೆ,
ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲೂ ಆಡಿಷನ್‌ ನಡೆಯಲಿದ್ದು, ಇದನ್ನು ಶೀಘ್ರವೇ ತಿಳಿಸುವುದಾಗಿ
ಹೇಳಲಾಗಿದೆ.

ಇನ್ನು, ಪ್ರಶಾಂತ್‌ ನೀಲ್‌ “ಕೆಜಿಎಫ್-2′ ಚಿತ್ರದಕೊನೆಯ ಹಂತದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್‌ ಭಾಗದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಚಿತ್ರದ ಹೈ-ವೋಲ್ಟೇಜ್ ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣಕ್ಕೆ
ಮಾಡಿಕೊಳ್ಳಲಾಗುತ್ತಿರುವ ತಯಾರಿ ಬಗ್ಗೆ ತಿಳಿಸಿದ್ದಾರೆ.ಕ್ಲೈಮ್ಯಾಕ್ಸ್‌ ಶೂಟಿಂಗ್‌ ಪ್ರಾರಂಭವಾಗಿರುವುದನ್ನು ನಿರ್ದೇಶಕ ಪ್ರಶಾಂತ್‌ ನೀಲ್‌ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದು, ಚಿತ್ರೀಕರಣ ಸೆಟ್‌ನಲ್ಲಿ ಸಾಹಸ ನಿರ್ದೇಶಕರಾದ ಅನ್ಬರಿವ್‌ ಸಹೋದರರ ಜೊತೆಗಿರುವ ಫೋಟೋವನ್ನು ಶೇರ್‌ ಮಾಡಿ, “ಕ್ಲೈಮ್ಯಾಕ್ಸ್‌ ಶೂಟಿಂಗ್‌, ರಾಕಿ ಮತ್ತು ಅಧೀರ ನಡುವೆ ಫೈಟ್‌ ದೃಶ್ಯ ಚಿತ್ರೀಕರಣ ಮಾಡಲಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಲಂಕಾಸುರನಿಗೆ ಪಾರ್ವತಿ ನಾಯಕಿ

ಇನ್ನು “ಕೆಜಿಎಫ್-2′ ಚಿತ್ರದ ಈ ಹೈ- ವೋಲ್ಟೇಜ್‌ ಆ್ಯಕ್ಷನ್‌ ದೃಶ್ಯಗಳಿಗೆ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರಾದ
ಅನ್ಬರಿವ್‌ ಸಹೋದರರು ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಈ ಹಿಂದೆ “ಕೆಜಿಎಫ್’ ಮೊದಲ ಭಾಗಕ್ಕೆ ಸಾಹಸ ದೃಶ್ಯಗಳಿಗೆ
ಸಾಹಸ ಸಂಯೋಜಿಸಿದ್ದ ಅನ್ಬರಿವ್‌ ಸಹೋದರರು, ಇತ್ತೀಚೆಗೆಕನ್ನಡದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ
“ರಾಬರ್ಟ್‌’ ಚಿತ್ರಕ್ಕೂ ಸಾಹಸ ಸಂಯೋಜಿಸಿದ್ದರು.

Advertisement

ಇದೇ ತಿಂಗಳಕೊನೆಗೆ “ಕೆಜಿಎಫ್-2′ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಮುಂಬರುವ ಜನವರಿ 8 ರಂದು ಯಶ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ನಿರ್ಧರಿಸಿದೆ.
ನಟ ಯಶ್‌ಕೂಡಾ “ಕೆಜಿಎಫ್-2′ ಚಿತ್ರದಕ್ಲೈಮ್ಯಾಕ್ಸ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಚಿತ್ರದ ಸ್ಟಿಲ್‌ ವೊಂದನ್ನುಕೂಡಾ
ಅಭಿಮಾನಿಗಳಿಗಾಗಿ ಪೋಸ್ಟ್‌ ಮಾಡಿದ್ದಾರೆ. “ಎಲ್ಲಾ ಒಳ್ಳೆಯ ವಿಷಯಗಳಿಗೂ ಒಂದುಕೊನೆ ಎಂಬುದಿರುತ್ತದೆ.ಇದುಕೆಜಿಎಫ್ -2
ಚಿತ್ರದ ಅಂತಿಮ ಹಂತದ ಚಿತ್ರೀಕರಣವಿರಬಹುದು, ಆದರೆ ವಿಲನ್‌ ಮಾತ್ರ ಶಾಶ್ವತವಾಗಿ ಉಳಿಯುತ್ತಾನೆ…’ ಎಂದು ಟ್ವೀಟ್‌
ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next