Advertisement

ಆಸ್ತಿಗಾಗಿ ಹಲ್ಲೆ ಪ್ರಕರಣ: ನಾಲ್ವರನ್ನು ಬಂಧಿಸಿದ ಕೇಶ್ವಾಪುರ ಪೊಲೀಸರು, ಓರ್ವ ಪರಾರಿ

02:56 PM Jul 09, 2021 | Team Udayavani |

ಹುಬ್ಬಳ್ಳಿ: ಆಸ್ತಿಗೆ ಸಂಬಂಧಿಸಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ, ನಾಲ್ವರನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿ ಕೊಂಡಿದ್ದಾನೆ.

Advertisement

ಹಲ್ಲೆ, ಕೊಲೆ ಯತ್ನ ಪ್ರಕರಣದಡಿ ಮುನ್ನಾ, ಶ್ರೀನಿವಾಸ್, ಜಾವೀದ್, ಇಮ್ರಾನ್ ಬಂಧಿತರಾಗಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ ಸಮರ್ಥನೆ ತಪ್ಪೆಂದ ಶಾಸಕ,ತಾನು ತಪ್ಪುಮಾಡಿಲ್ಲ ಎಂದ ಎಸ್ ಐ:ಏನಿದು ಕಾರ್ಕಳ ಘಟನೆ?

ಇಲ್ಲಿನ ಗೋಪನಕೊಪ್ಪ ಸ್ವಾಗತ ಕಾಲೋನಿಯ ವೀರೇಶ ಹೆಗಡಾಳ ಎಂಬುವರ ತಾಯಿಯ ಹೆಸರಿನಲ್ಲಿ ಕುಂದಗೋಳ ತಾಲೂಕ ತರ್ಲಘಟ್ಟ ಗ್ರಾಮದಲ್ಲಿದ್ದ 1ಎಕರೆ 16ಗುಂಟೆ ಜಮೀನನ್ನು ಬೇರೆಯವರಿಗೆ ಒತ್ತೆ ಹಾಕಿದ್ದರು. ಈ ಜಮೀನನ್ನು ಮುನ್ನಾ ಬೇಪಾರಿ, ಅಲ್ತಾಫ ಬೇಪಾರಿ ಎಂಬುವರು ಬೇರೆಯವರಿಗೆ ಮಾರಾಟ ಮಾಡಿದ್ದರು. ಅದನ್ನು ವಾಪಸ್ಸು ಕೊಡುವಂತೆ ವೀರೇಶ ಕೇಳಿದ್ದಕ್ಕೆ ಗುರುವಾರ ರಾತ್ರಿ ಇಲ್ಲಿನ ಬೆಂಗೇರಿಯ ಸಂತೆ ಬಯಲಿಗೆ ವೀರೇಶನನ್ನು ಕರೆಯಿಸಿ, ಮಾರಣಾಂತಿಕ ಹಲ್ಲೆ ಮಾಡಿದ್ದರು.

ಗಂಭೀರ ಗಾಯಗೊಂಡಿರುವ ವೀರೇಶ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next