Advertisement

ಹೊರ ರಾಜ್ಯದಲ್ಲಿರುವ ಕೇರಳಿಗರು ರಾಜ್ಯಕ್ಕೆ ಮರಳಲು ಆರು ಗಡಿ ಮಾರ್ಗ ತೆರೆದ ಪಿಣರಾಯಿ ಸರಕಾರ

05:06 PM May 05, 2020 | Hari Prasad |

ತಿರುವನಂತಪುರ: ಕೋವಿಡ್ 19 ವೈರಸ್ ಲಾಕ್‌ಡೌನ್‌ನಿಂದಾಗಿ ಇತರ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೇರಳಿಗರು ರಾಜ್ಯಕ್ಕೆ ಮರಳಲು ಅನುಕೂಲವಾಗುವಂತೆ ಗಡಿಯಲ್ಲಿನ ಆರು ಕಡೆಯಲ್ಲಿನ ಮಾರ್ಗಗಳನ್ನು ಕೇರಳ ರಾಜ್ಯ ಸರಕಾರ ಸೋಮವಾರ ತೆರೆದಿದೆ.

Advertisement

ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಗಡಿಯಲ್ಲಿನ ತನ್ನೆಲ್ಲಾ ಮಾರ್ಗಗಳನ್ನು ಕೇರಳ ಸರಕಾರ ಮುಚ್ಚಿತ್ತು. ಆ ಪೈಕಿ ಪ್ರಸ್ತುತ ತಿರುವನಂತಪುರದ ಇಂಚಿವಿಲ, ಕೊಲ್ಲಂ ಜಿಲ್ಲೆಯ ಆರ್ಯಂಕವು, ಇಡುಕ್ಕಿ ವ್ಯಾಪ್ತಿಯ ಕುಮಿಲಿ, ಪಾಲಕ್ಕಾಡ್‌ ಜಿಲ್ಲೆಯ ವಲಯಾರ್‌, ವಯನಾಡ್‌ ಜಿಲ್ಲೆಯ ಮುತಂಗ ಮತ್ತು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸೇರಿ 6 ಕಡೆ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಈ ಚೆಕ್‌ಪೋಸ್ಟ್‌ಗಳ ಮೂಲಕ ತನ್ನ ರಾಜ್ಯದ ಜನರಿಗೆ ಮಾತ್ರ ಪ್ರವೇಶ ನೀಡುವುದಾಗಿ ಸರಕಾರ ತಿಳಿಸಿದೆ.

ಅಂತಾರಾಜ್ಯ ಗಡಿಯಲ್ಲಿನ ಮಾರ್ಗಗಳನ್ನು ತೆರೆದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿರುವ 1.5 ಲಕ್ಷ ಕೇರಳಿಗರು ರಾಜ್ಯಕ್ಕೆ ವಾಪಸಾಗಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ನಡುವೆ ಗಡಿಯಲ್ಲಿನ ಪ್ರತಿಯೊಂದು ಪ್ರವೇಶ
ಮಾರ್ಗದ ಬಳಿ 500 ಮಂದಿ ಉಳಿದುಕೊಳ್ಳಲು ಮತ್ತು ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಆಯಾ ಜಿಲ್ಲಾಡಳಿತಗಳಿಗೆ ಸರಕಾರ ಸೂಚನೆ ನೀಡಿದೆ.

ಕೇರಳಿಗರನ್ನು ಬರಮಾಡಿಕೊಳ್ಳಲು ಗಡಿಯಲ್ಲಿ 60 ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಿ.ಸುಜಿತ್‌ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next