Advertisement

ಕೇರಳ ಆರ್‌ಎಸ್‌ಎಸ್ ಮುಖಂಡನ ಹತ್ಯೆ:ನಿಷೇಧಿತ ಪಿಎಫ್‌ಐ ಸದಸ್ಯ ಬಂಧನ

10:31 PM May 17, 2023 | Team Udayavani |

ಪಾಲಕ್ಕಾಡ್: 2022 ರಲ್ಲಿ ನಡೆದ ಆರ್‌ಎಸ್‌ಎಸ್ ಮುಖಂಡನ ಹತ್ಯೆಗೆ ಸಂಬಂಧಿಸಿದಂತೆ ಬೇಕಾಗಿದ್ದ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯನನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ತಿಳಿಸಿದೆ.

Advertisement

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 2022 ರ ಏಪ್ರಿಲ್ 16 ರಂದು ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ ಹತ್ಯೆಯಾದ ನಂತರ ಪ್ರಮುಖ ಆರೋಪಿ ಸಹೀರ್ ಕೆ.ವಿ.  ತಲೆಗೆ 4 ಲಕ್ಷ ರೂ ಇನಾಮು ಘೋಷಿಸಲಾಗಿತ್ತು. ಆತ ತಲೆಮರೆಸಿಕೊಂಡಿದ್ದಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.

ಬಂಧನವನ್ನು ಪ್ರಮುಖ ಪ್ರಗತಿ ಎಂದು ಬಣ್ಣಿಸಿದ ಅಧಿಕಾರಿ, ಎನ್‌ಐಎ ಪ್ಯುಗಿಟಿವ್ ಟ್ರ್ಯಾಕಿಂಗ್ ತಂಡ (ಎಫ್‌ಟಿಟಿ) ಅವರನ್ನು ಪಾಲಕ್ಕಾಡ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಪತ್ತೆಹಚ್ಚಿ ಬಂಧಿಸಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next