Advertisement

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

05:54 PM Jul 23, 2024 | Team Udayavani |

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್) ಕುಟುಂಬ ಪ್ರಬೋಧನ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತದ ಸಂಯೋಜಕರಾದ ಪ.ರಾ.ನಾಗರಾಜ ಭಟ್ಟ (62) ಅವರು ನಿಧನರಾಗಿದ್ದಾರೆ.

Advertisement

ಮೃತರಿಗೆ ಪತ್ನಿ, ಇಬ್ಬರು ಸಹೋದರರು, ಒಬ್ಬರು ಸಹೋದರಿ ಹಾಗೂ ಅಪಾರ ಬಂಧು ಬಳಗವಿದೆ. ಮೂಲತಃ ಅಥಣಿಯವರು. ಸದ್ಯ ಇಲ್ಲಿ‌ನ ಗೋಕುಲ ರಸ್ತೆಯ ಕೋಟಿಲಿಂಗನಗರದಲ್ಲಿ ವಾಸವಿದ್ದರು.

ಕಳೆದ 12 ವರ್ಷಗಳ ಕಾಲ ಸಂಘದ ಪ್ರಚಾರಕರಾಗಿದ್ದರು. ವಿಭಾಗ, ಪ್ರಾಂತ ಸ್ತರದಲ್ಲಿ ಸಂಘದ ಜವಾಬ್ದಾರಿ ನಿರ್ವಹಿಸಿದ್ದರು. ಸದ್ಯ ಕುಟುಂಬ ಪ್ರಬೋಧನ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next