Advertisement

ಪಿಣರಾಯಿಗೆ ಕೊಲೆ ಬೆದರಿಕೆ

08:15 AM Jun 08, 2018 | Team Udayavani |

ದುಬೈ: ದುಬೈನಲ್ಲಿರುವ ಭಾರತೀಯ ನಿವಾಸಿಯೊಬ್ಬರು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಫೇಸ್‌ ಬುಕ್‌ ವಿಡಿಯೋ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದು, ಈ ವಿಷಯ ಬಹಿರಂಗವಾಗುತ್ತಲೇ ಉದ್ಯೋಗ ನಿರ್ವಹಿಸುತ್ತಿದ್ದ ಸಂಸ್ಥೆ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಕೃಷ್ಣ ಕುಮಾರ್‌ ಎಸ್‌ಎನ್‌ ನಾಯರ್‌ ಕೆಲಸ ಕಳೆದುಕೊಂಡ ವ್ಯಕ್ತಿ. ತಾವು ಆರ್‌.ಎಸ್‌.ಎಸ್‌. ಬೆಂಬಲಿಗ ಎಂದು ಹೇಳಿಕೊಂಡಿರುವ ಅವರು, ಅಬುಧಾಬಿ ಮೂಲದ ನಿರ್ಮಾಣ ಸಂಸ್ಥೆಯಲ್ಲಿ ಹಿರಿಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 4 ನಿಮಿಷದ ವಿಡಿಯೋವನ್ನು ಫೇಸ್‌ ಬುಕ್‌ ನಲ್ಲಿ ಹರಿಬಿಟ್ಟಿರುವ ಇವರು, ನಾನು ಪಿಣರಾಯಿಯನ್ನು ಕೊಲೆ ಮಾಡಲೆಂದೇ ಕೇರಳಕ್ಕೆ ಬರಲಿದ್ದೇನೆ ಎಂದು ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next