Advertisement

Wayanad ಸಂತ್ರಸ್ತರ ಕಷ್ಟ ಕೇಳಿ ಅತ್ತ ಕೇರಳ ಅರಣ್ಯ ಸಚಿವ ಶಶೀಂದ್ರನ್‌

01:01 AM Aug 12, 2024 | Team Udayavani |

ವಯನಾಡ್‌: ಭೂಕುಸಿತ ಉಂಟಾದ ವಯನಾಡ್‌ನ‌ಲ್ಲಿ ಸಂತ್ರಸ್ತರೊಂದಿಗೆ ಮಾತನಾಡುವಾಗ ಕೇರಳ ಅರಣ್ಯ ಸಚಿವ ಎ.ಕೆ.ಶಶೀಂದ್ರನ್‌ ಭಾವುಕರಾದ ಘಟನೆ ರವಿವಾರ ನಡೆದಿದೆ. ಕುಟುಂಬಸ್ಥರನ್ನು ಕಳೆದು ಕೊಂಡ ಸಂತ್ರಸರ ಬಳಿ ಶಶೀಂದ್ರನ್‌ ಸಂಕಷ್ಟಗಳನ್ನು ಆಲಿಸುತ್ತಿದ್ದರು. ಭೂಕುಸಿತ ಪೀಡಿತ ಸ್ಥಳದಲ್ಲಿ ತಂದೆ- ಮಗ ತಮ್ಮ ಮನೆಯಿದ್ದ ಸ್ಥಳದಲ್ಲಿ ಏನನ್ನೋ ಹುಡುಕುತ್ತಿದ್ದನ್ನು ಕಂಡರು. ಅವರನ್ನು ಮಾತ ನಾಡಿಸಿದ ಬಗ್ಗೆ ಮಾಧ್ಯಮದವರಿಗೆ ವಿವರಿಸುವ ವೇಳೆ ಸಚಿವರು ಅತ್ತಿದ್ದಾರೆ. “ನನ್ನ ಜೀವನದಲ್ಲಿ ಇಂಥ ಸಂದರ್ಭ ಬರುವ ಬಗ್ಗೆ ನಿರೀಕ್ಷೆ ಇರಲಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರವಿಲ್ಲ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next