Advertisement

ಕೇರಳ ಪ್ರವಾಹದಲ್ಲಿ ಹಲವರನ್ನು ರಕ್ಷಿಸಿದ ಮೀನುಗಾರ ದುರ್ಮರಣ 

10:04 AM Oct 02, 2018 | Team Udayavani |

ತಿರುವನಂತಪುರಂ: ಕೇರಳದಲ್ಲಿ  ಶತಮಾನಗಳು ಕಂಡರಿಯದ ಭೀಕರ ಪ್ರವಾಹದಲ್ಲಿ  ಸಿಲುಕಿದ್ದ ಹಲವರನ್ನು ರಕ್ಷಿಸಿದ್ದ ಯುವ ಮೀನುಗಾರರೊಬ್ಬರು ಭಾನುವಾರ ನಡೆದ ಭೀಕರ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. 

Advertisement

ಅಲಪ್ಪುರದಲ್ಲಿ  ಎದುರಾದ ಭೀಕರ ಪ್ರವಾಹದ ವೇಳೆ ಪ್ರಾಣದ ಹಂಗು ತೊರೆದು  ತುರ್ತು ಕಾರ್ಯಾಚರಣೆಗೆ ಇಳಿದಿದ್ದ 24 ರ ಹರೆಯದ ಜಿನೇಶ್‌ ಹಲವರನ್ನು ರಕ್ಷಿಸಿದ್ದರು. ವಿಧಿಯ ಕ್ರೂರ ಲೀಲೆಗೆ ಎದುರಾದ ಅವರು ಬೈಕ್‌ ಅಪಘಾತಕ್ಕೆ ಗುರಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

ಜಿನೇಶ್‌ ನಿಧನಕ್ಕೆ ದೇಶಾದ್ಯಂತ ಜನರು ತೀವ್ರ ಕಂಬನಿ ಮಿಡಿದಿದ್ದಾರೆ. 

ಕೇರಳದಲ್ಲಿ ಪ್ರವಾಹದಿಂದ ಆಪತ್ತು ಎದುರಾದಾಗ 200 ಕ್ಕೂ ಹೆಚ್ಚು ಮೀನುಗಾರರು 65,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next