Advertisement

ರೈಲಿನಿಂದ ಬಿದ್ದು 80ರ ಹರೆಯದ ಕೇರಳ ಬಿಷಪ್‌ ದಾರುಣ ಸಾವು

12:08 PM Aug 24, 2018 | Team Udayavani |

ಕೊಚ್ಚಿ : 80ರ ಹರೆಯದ ಕೇರಳ ಬಿಷಪ್‌ ಥಾಮಸ್‌ ಮಾರ್‌ ಎಥನಾಸಿಯೋಸ್‌ ಅವರು ಇಂದು ಶುಕ್ರವಾರ ಬೆಳಗ್ಗೆ 5.45ರ ವೇಳೆಗೆ ಚಲಿಸುತ್ತಿದ್ದ ರೈಲಿನಿಂದ ಕೆಳ ಬಿದ್ದು ಮೃತಪಟ್ಟಿರುವ ದುರ್ಘ‌ಟನೆ ನಡೆದಿದೆ. 

Advertisement

ಥಾಮಸ್‌ ಮಾರ್‌ ಅವರು ಮಲಾಂಕರ ಅರ್ಥಡಕ್ಸ್‌ ಸಿರಿಯನ್‌ ಚರ್ಚಿನ ಶೆಂಗನ್ನೂರು ಡಯೋಸಿಸ್‌ ಮುಖ್ಯಸ್ಥರು. ಇವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪುಳೆಪೇಡಿ ಎಂಬಲ್ಲಿ ರೈಲಿನ ಬಾಗಿಲ ಬಳಿ ನಿಂತಿದ್ದರು. ಆಗ ಒಡನೆಯೇ ಬಾಗಿಲು ಬಲವಾಗಿ ಮುಚ್ಚಿಕೊಂಡಿತು. ಪರಿಣಾಮವಾಗಿ ಥಾಮಸ್‌ ಮಾರ್‌ ಅವರು ರೈಲಿನಿಂದ ಹೊರ ಬಿದ್ದು ಮೃತಪಟ್ಟರು ಎಂದು ವರದಿ ತಿಳಿಸಿದೆ. 

ಬಿಷಪ್‌ ಥಾಮಸ್‌ ಅವರು ಕೋಟ್ಟಯಂ ಚರ್ಚ್‌ ವ್ಯಾಪ್ತಿಯ ಶೆಂಗನ್ನೂರು ಡಯೋಸಿಸ್‌ ಮುಖ್ಯಸ್ಥರಾಗಿದ್ದರೂ ದೂರದ ಗುಜರಾತ್‌ನಲ್ಲಿನ  ಕೆಲವು ಶಿಕ್ಷಣ ಸಂಸ್ಥೆಗಳನ್ನು  ಅವರು ನಡೆಸುತ್ತಿದ್ದರು. ಹಾಗಾಗಿ ಇವರು ಗುಜರಾತ್‌ ಮತ್ತು ಶೆಂಗನ್ನೂರ್‌ ನಡುವೆ ಆಗೀಗ ಎಂಬಂತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. 

ಕಳೆದ ಮೇ 29ರಿಂದ ಕೇರಳದ ಆದ್ಯಂತ ಸುರಿದ ಜಡಮಳೆಯಿಂದಾಗಿ ಸರಣಿ ದುರಂತಗಳು ಸಂಭವಿಸಿದ ಸುದ್ದಿ ತಿಳಿದ ಬಿಷಪ್‌ ಥಾಮಸ್‌ ಅವರು ತಮ್ಮ ಪ್ರಧಾನ ಕಾರ್ಯಾಲಯಕ್ಕೆ ಮರಳುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next