Advertisement

ಹೋಳಿ ದುರಂತ : ಮೂವರು ಮಕ್ಕಳ ದಾರುಣ ಸಾವು

04:37 PM Mar 13, 2017 | udayavani editorial |

ಕೇಂದ್ರಪಾರ, ಒಡಿಶಾ :ಹೋಳಿ ಹಬ್ಬ ಸಂಬಂಧಿತ ಎರಡು ಪ್ರತ್ಯೇಕ ದುರ್ಘ‌ಟನೆಗಳಲ್ಲಿ ಮೂವರು ಮಕ್ಕಳು ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ.

Advertisement

ಬಂಗಾಲ್‌ಪುರ ಗ್ರಾಮದಲ್ಲಿ ಹೋಳಿ ಹಬ್ಬದ ಓಕುಳಿಯನ್ನು ಆಡಿದ ಬಳಿ ಸ್ನಾನಕ್ಕೆಂದು ಕೊಳಕ್ಕೆ ಹೋದ 12 ವರ್ಷ ಪ್ರಾಯದ ಚೂಯಿಯಾನ್‌ ನಾಯಕ್‌ ಮತ್ತು ನೃಸಿಂಹ ಸುತಾರ್‌ ಎಂಬ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟರೆ. 

ಇನ್ನೊಂದು ಪ್ರಕರಣದಲ್ಲಿ ಗೋಪಿನಾಥಪುರ ಗ್ರಾಮದಲ್ಲಿನ ತನ್ನ ಮನೆಯ ಹಿತ್ತಲಲ್ಲಿದ್ದ ಕೊಳಕ್ಕೆ ಎರಡೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಬಿದ್ದು  ಮೃತಪಟ್ಟಿತು. 

Advertisement

Udayavani is now on Telegram. Click here to join our channel and stay updated with the latest news.

Next