Advertisement

ಕೆಳಾರ್ಕಳಬೆಟ್ಟು: ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ

03:45 AM Feb 12, 2017 | Harsha Rao |

ಉಡುಪಿ: ದೈವ – ದೇವರ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಆರೋಗ್ಯ ವೃದ್ಧಿಯೊಂದಿಗೆ ಊರು ಕೂಡ ಸುಭಿಕ್ಷವಾಗಲಿದೆ. ಹಿರಿಯರಿಂದ ಪಾರಂಪರಿಕವಾಗಿ ನಡೆದು ಬಂದ ದೈವ – ದೇವತಾರಾಧನೆಯನ್ನು ಮುಂದುವರಿಸಿಕೊಂಡು ಹೋಗುವ ಕಾರ್ಯ ಯುವಜನಾಂಗದ ಜವಾ ಬ್ದಾರಿಯಾಗಿದೆ. ಇದಕ್ಕೆ ಹೆತ್ತವರೂ ಕೂಡ ಸಹಕಾರ ನೀಡುವುದರೊಂದಿಗೆ ಧಾರ್ಮಿಕ ಪ್ರಕ್ರಿಯೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು ಎಂದು ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ನುಡಿದರು.

Advertisement

ಕೆಳಾರ್ಕಳಬೆಟ್ಟು ಶ್ರೀ ಕಂಬಿಗಾರ ದೇವರ ಸಾನಿಧ್ಯ ಹಾಗೂ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಸಪರಿವಾರ ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಗಳ ಪುನಃಪ್ರತಿಷ್ಠೆ, ಕಲಶಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಶ್ರೀಪಾದರು ಶುಕ್ರವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತೆಂಕನಿಡಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯಕುಮಾರ್‌ ಬೆಳ್ಕಳೆ, ತಾಲೂಕು ಪಂಚಾಯತ್‌ ಸದಸ್ಯ ಧನಂಜಯ, ಉದ್ಯಮಿಗಳಾದ ಭಾಸ್ಕರ ಶೆಟ್ಟಿ, ಕೃಷ್ಣ ಸುವರ್ಣ, ಶಂಕರ ಸುವರ್ಣ, ದಯಾನಂದ ಶೆಟ್ಟಿ ಕೊಜಕುಳಿ, ಕೆಳಾರ್ಕಳಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ರಾಜೀವಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿ ಆರ್‌. ಆಚಾರ್ಯ, ಗುರಿಕಾರರಾದ ನಾಧು ಗುರಿಕಾರ, ಸೋಮು ಗುರಿಕಾರ, ಶ್ರೀದೇವಿ ಭೂದೇವಿ ಶ್ರೀ ವಿಷ್ಣುಮೂರ್ತಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ನಾಯಕ್‌ ಉಪಸ್ಥಿತರಿದ್ದರು.

ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್‌ ಶೆಟ್ಟಿ ಸ್ವಾಗತಿಸಿದರು.
ಕೋಶಾಧಿಕಾರಿ ರತ್ನಾಕರ ಪ್ರಸ್ತಾವನೆ ಗೈದರು. ಶಿಕ್ಷಕ ಪ್ರಶಾಂತ್‌ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿ, ಕಾರ್ಯ ದರ್ಶಿ ಮೋಹನದಾಸ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next