Advertisement

Arrest ಬಳಿಕ ಕೇಜ್ರಿ ತೂಕ 8.5 ಕೆ.ಜಿ. ಇಳಿಕೆ: ಬಿಜೆಪಿ ವಿರುದ್ಧ ಆಪ್‌ ಕಿಡಿ

12:37 AM Jul 14, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನಕ್ಕೀಡಾದ ಬಳಿಕ ಅವರು 8.5 ಕೆ.ಜಿ.ಯಷ್ಟು ತೂಕ ಕಳೆದುಕೊಂಡಿದ್ದಾರೆ. ಅಲ್ಲದೇ ಬಂಧನದ ಬಳಿಕ ಐದು ಬಾರಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು 50ಎಂಜಿ/ಡಿಎಲ್‌ಗಿಂತಲೂ ಕಡಿಮೆ ಯಾಗಿದೆಂದು ಆಪ್‌ ಎಂಪಿ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.

Advertisement

ಶನಿವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿರುವ ಸಿಂಗ್‌, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕೇಜ್ರಿವಾಲ್‌ ಅವರು “ಗಂಭೀರ ಕಾಯಿಲೆ’ಯಿಂದ ನರಳುವಂತೆ ಮಾಡಲು ಪಿತೂರಿ ರೂಪಿಸಿದೆ. ಅವರು ಬಂಧನಕ್ಕೀಡಾದಾಗ 70 ಕೆ.ಜಿ. ಇದ್ದರು. ಈಗ 61.5 ಕೆಜಿಗೆ ಇಳಿದಿದ್ದಾರೆ. ತೂಕ ಇಳಿಕೆಗೆ ಕಾರಣವೂ ತಿಳಿದಿಲ್ಲ, ಈ ಬಗ್ಗೆ ಪರೀಕ್ಷೆಯನ್ನೂ ಮಾಡಲಾಗಿಲ್ಲ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ಇದು ಕಳವಳಕಾರಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next