Advertisement

ಕೇಜ್ರಿವಾಲ್ ಯಾದವ ಸಮುದಾಯವನ್ನು ಅವಮಾನಿಸಿದ್ದಾರೆ: ಕ್ಷಮೆಗೆ ಬಿಜೆಪಿ ಪಟ್ಟು

03:23 PM Oct 09, 2022 | Team Udayavani |

ಪಾಟ್ನಾ: ಯಾದವ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಒಬಿಸಿ ಮೋರ್ಚಾ ಭಾನುವಾರ ಆರೋಪಿಸಿದೆ.

Advertisement

ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಎಎಪಿ ಮುಖ್ಯಸ್ಥ ಜನಾಂಗೀಯ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಭಾರತ್ ಜೋಡೋ ಬಳಿಕ ರಾಹುಲ್ ಹೊಸ ಅವತಾರದಲ್ಲಿ : ದಿಗ್ವಿಜಯ್ ಸಿಂಗ್

ಗುಜರಾತ್ ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್ ಅವರ “ಜನ್ಮಾಷ್ಟಮಿಯಂದು ಜನಿಸಿದ್ದೇನೆ, ಶ್ರೀಕೃಷ್ಣ ಮಾಡಿದಂತೆ ಕಂಸನ ವಂಶಸ್ಥರನ್ನು ಸೋಲಿಸುವುದಾಗಿ” ಪ್ರತಿಜ್ಞೆ ಮಾಡಿದ ಹೇಳಿಕೆಗಳನ್ನು ಖಂಡಿಸಿದ್ದಾರೆ.

“ಜನ್ಮಾಷ್ಟಮಿಯಂದು ಜನಿಸಿದ ಮಾತ್ರಕ್ಕೆ ಕೇಜ್ರಿವಾಲ್ ತನ್ನನ್ನು ಶ್ರೀಕೃಷ್ಣನೊಂದಿಗೆ ಸಮೀಕರಿಸಿಕೊಳ್ಳಬಹುದೆಂದು ಭಾವಿಸಿದ್ದಾರೆಂದು ತೋರುತ್ತದೆ. ಆದರೆ ಶ್ರೀಕೃಷ್ಣನು ತನ್ನ ಪಾಪಗಳಿಗಾಗಿ ಕಂಸನನ್ನು ಶಿಕ್ಷಿಸಿದ್ದಾನೆ ಆದರೆ ಮಥುರಾದ ರಾಜನ ಸಂಪೂರ್ಣ ಕುಲವನ್ನು ನಾಶಮಾಡಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಅವರು ಅರಿತುಕೊಳ್ಳಬೇಕು” ಎಂದು ಬಿಹಾರ ಬಿಜೆಪಿ ವಕ್ತಾರರೂ ಆಗಿರುವ ಆನಂದ್ ಹೇಳಿದರು.

Advertisement

“ಕಂಸನು ಶ್ರೀಕೃಷ್ಣನ ಸ್ವಂತ ಮಾವ ಮತ್ತು ಎಲ್ಲಾ ಯಾದವರು ತಮ್ಮನ್ನು ಭಗವಾನ್ ವಿಷ್ಣುವಿನ ವಂಶಸ್ಥರು ಎಂದು ಪರಿಗಣಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕೇಜ್ರಿವಾಲ್ ಅವರ ಜನಾಂಗೀಯ ಹೇಳಿಕೆಯಿಂದ ಯಾದವರು ಮನನೊಂದಿದ್ದಾರೆ. ಎಎಪಿ ಮುಖ್ಯಸ್ಥರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next