Advertisement

ಇವಿಎಂ ತಿರುಚುವುದು ಹೇಗೆ ಎಂದು ಹೇಳ್ತಾರಂತೆ ಕೇಜ್ರಿ!

03:50 AM Apr 15, 2017 | Team Udayavani |

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚಲು ಸಾಧ್ಯವಿದೆ ಎಂಬ ವಾದವನ್ನು ಮುಂದುವರಿಸಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, “ನಾನು ಐಐಟಿಯಿಂದ ಪದವಿ ಪಡೆದ ಎಂಜಿನಿಯರ್‌. ಇವಿಎಂಗಳನ್ನು ತಿರುಚಲು ಸಾಧ್ಯವಿರುವ 10 ಮಾರ್ಗಗಳನ್ನು ತಿಳಿಸಿಕೊಡಬಲ್ಲೆ,’ ಎನ್ನುವ ಮೂಲಕ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ. 

Advertisement

ಇನ್ನೊಂದೆಡೆ ರಜೌಲಿ ಗಾರ್ಡನ್‌ ಚುನಾವಣೆ ಸೋಲನ್ನು ಶಾಸಕ ಜರ್ನೈಲ್‌ ಸಿಂಗ್‌ ತಲೆಗೆ ಕಟ್ಟಿರುವ ಕೇಜ್ರಿವಾಲ್‌, “ಪಂಜಾ ಬ್‌ಗಾಗಿ ಜರ್ನೈಲ್‌ ರಜೌಲಿ ಬಿಟ್ಟ ಬಗ್ಗೆ ಮುನಿಸಿಕೊಂಡ ಮತ ದಾರರು ಉಪಚುನಾವಣೆಯಲ್ಲಿ ಪಕ್ಷವನ್ನು ಸೋಲಿಸಿದ್ದಾರೆ,’ ಎಂದಿದ್ದಾರೆ. ಇದೇ ವೇಳೆ, ಕಾರ್ಯತಂತ್ರ ಬದಲಿಸಲು ನಿರ್ಧರಿ ಸಿರುವ ಆಪ್‌ ಇನ್ನು ಮುಂದೆ ಪ್ರಧಾನಿ ಮೋದಿ ಅವರನ್ನು ಟೀಕಿಸುವುದನ್ನೇ ಅಸ್ತ್ರವಾಗಿಸಿಕೊಳ್ಳುವ ಬದಲು ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next