Advertisement

ಕಾವ್ಯಾ ಸಾವು: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

08:45 AM Aug 02, 2017 | Team Udayavani |

ಉಡುಪಿ: ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ನಗರದ ಕ್ಲಾಕ್‌ ಟವರ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. 

Advertisement

ಕರವೇ ರಾಜ್ಯ ಸಂಚಾಲಕ ಪ್ರವೀಣ್‌ ಕುಮಾರ್‌ ಶೆಟ್ಟಿ ಮಾತನಾಡಿ, 15 ದಿನಗಳ ಒಳಗೆ ಕಾವ್ಯಾ ಸಾವಿಗೆ ನ್ಯಾಯ ದೊರೆಯದಿದ್ದರೆ ಆಳ್ವಾಸ್‌ ಕಾಲೇಜ್‌ಗೆ ಮುತ್ತಿಗೆ ಹಾಕುತ್ತೇವೆ ಎಂದರು. 

ಕಾವ್ಯಾಳ ತಾಯಿ ಬೇಬಿ ಮಾತನಾಡಿ, ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವದ ಹುಡುಗಿಯಲ್ಲ. ಅಕೆಯನ್ನು ಕೊಲೆ ಮಾಡಲಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ನ್ಯಾಯಕ್ಕಾಗಿ ನಾವು ಹೋರಾಟ ಮುಂದುವರಿಸುತ್ತೇವೆ ಎಂದರು. ಕರವೇ ಜಿಲ್ಲಾಧ್ಯಕ್ಷ ಅನ್ಸಾರ್‌ ಅಹಮ್ಮದ್‌, ಶಾಹಿಲ್‌ ರೆಹಮತುಲ್ಲಾ, ಜಾರ್ಜ್‌ ಡಿಸೋಜ, ಎಂ.ಜಿ. ನಾಗೇಂದ್ರ, ಮಧುಕರ, ರಾಬರ್ಟ್‌ ರೊಸಾರಿಯೊ, ರೆಹಮಾನ್‌, ಕೆವಿನ್‌, ಲೋಕೇಶ್‌, ಉಮೇಶ್‌ ಜೋಗಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next