Advertisement

ಕಾವೂರು: ಸಿಗಡಿ ಕೃಷಿ ಹೊಂಡಕ್ಕೆ ಬಿದ್ದು ಸಾವು

11:37 AM Jun 16, 2018 | Team Udayavani |

ಮಂಗಳೂರು: ಕಾವೂರು ಸಮೀಪದ ಬಡ್ಡಗದ್ದೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಸಿಗಡಿ ಕೃಷಿ ಹೊಂಡಕ್ಕೆ ಬಿದ್ದು, ಕೂಲಿ ಕಾರ್ಮಿಕ ಬಾದಾಮಿಯ ಮುತ್ತ (21) ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.

Advertisement

ಸಿಗಡಿ ಕೃಷಿ ಸಂಬಂಧಿಸಿದ ವಿವಿಧ ಕೆಲಸ ನಿರ್ವಹಿಸುತ್ತಿದ್ದ ಅವರು ಮಧ್ಯಾಹ್ನ 12 ಗಂಟೆ ವೇಳೆಗೆ ಹೊಂಡದ ಬಳಿ ಹೋದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದರು. ಹೊಂಡದಲ್ಲಿ ಸುಮಾರು 6 ಅಡಿ ನೀರಿದ್ದು, ಮುತ್ತ ಅವರು ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದರು. ಸಿಗಡಿ ಕೃಷಿ ಹೊಂಡದ ಪ್ರದೇಶಕ್ಕೆ ಹೋಗಿದ್ದ ಮುತ್ತ ಬಹಳ ಹೊತ್ತಾದರೂ ಹಿಂದಿರುಗದಿದ್ದಾಗ 1.30ರ ಸುಮಾರಿಗೆ ಮನೆ ಮಂದಿ ಹುಡುಕಾಟ ನಡೆಸಿದ್ದರು. ಆಗ ಮುತ್ತ ಅವರು ಕೃಷಿ  ಹೊಂಡದ ನೀರಿನಲ್ಲಿ  ತೇಲುತ್ತಿರುವುದು ಕಂಡು ಬಂದಿತ್ತು. ಅವರನ್ನು ಮೇಲಕ್ಕೆತ್ತಿದಾಗ ಸಾವನ್ನಪ್ಪಿರುವ ವಿಷಯ ತಿಳಿಯಿತು.
ಕಾವೂರು ಪೊಲೀಸ್‌ ಠಾಣೆಯಲ್ಲಿ  ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

ಮುತ್ತ ಅವರನ್ನು ಸಂಬಂಧಿಕರೊಬ್ಬರು ಕೂಲಿ ಕೆಲಸಕ್ಕಾಗಿ ಬಾದಾಮಿಯಿಂದ 15 ದಿನಗಳ ಹಿಂದೆ ಮಂಗ ಳೂರಿಗೆ ಕರೆ ತಂದಿದ್ದರು. ಅವರು ಸಿಗಡಿ ಕೃಷಿ ಹೊಂಡದಲ್ಲಿರುವ ಸಿಗಡಿಗಳಿಗೆ ಆಹಾರ ಹಾಕುವ ಮತ್ತು ಇತರ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಅವರಿಗೆ ನೀರು ತುಂಬಿರುವ ಹೊಂಡಕ್ಕೆ ಇಳಿದು ಅಭ್ಯಾಸವಿಲ್ಲ ಎನ್ನಲಾಗಿದೆ. ಇಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಅವರು ಶನಿವಾರ (ಜೂ.16) ಅವರು ಊರಿಗೆ ವಾಪಸಾಗಲು ನಿರ್ಧರಿಸಿದ್ದರು. ತಂದೆ- ತಾಯಿಗೆ ಅವರು ಏಕೈಕ ಪುತ್ರರಾಗಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next