Advertisement

ಕವಟಗಿ ಡಿನ್ನರ್‌: ಸ್ಪಷ್ಟನೆ ಕೇಳಿದ ಸಿದ್ದು

06:00 AM Dec 21, 2018 | Team Udayavani |

ಬೆಳಗಾವಿ: ವಿಧಾನ ಪರಿಷತ್‌ ರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ್‌ ಕವಟಗಿಮಠ ಕರೆದಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿರುವ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಮಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯ ಮಾಲಾ ಅವರಿಂದ ಸ್ಪಷ್ಟನೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ನಗರದ ಸರ್ಕಿಟ್‌ ಹೌಸ್‌ಗೆ ಇಬ್ಬರೂ ಸಚಿವರನ್ನು ಕರೆುಸಿಕೊಂಡ ಸಿದ್ದರಾಮಯ್ಯ ಬಿಜೆಪಿ ನಾಯಕರು ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿರುವುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದರು ಎಂದು ತಿಳಿದು ಬಂದಿದೆ. ಮಹಾಂತೇಶ್‌ ಕವಟಗಿಮಠ ಜಿಲ್ಲೆಯ ಮುಖಂಡರಾಗಿದ್ದರಿಂದ ಭೋಜನ ಕೂಟಕ್ಕೆ ಆಗುಸುವಂತೆ ಮನ ಮಾಡಿದ್ದರು. ಆ ನ್ನೆಲೆಯಲ್ಲಿ ಭೋಜನ ಕೂಟದಲ್ಲಿ ಪಾಲ್ಗೊಂಡಿರುವುದಾಗಿ ಸಚಿವ ರಮೇಶ್‌ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅದೇ ರೀತಿ ಸಚಿವೆ ಜಯಮಾಲಾ ಕೂಡ ತಾವು ಧಾನ ಪರಿಷತ್ತಿನ ಸಭಾನಾಯಕಿ ಆಗಿರುವುದರಿಂದ ಅವರ ಆಹ್ವಾನದ ಮೇರೆಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವೆ ಜಯಮಾಲಾ, ಸ್ನೇತರು ಕರೆದಿದ್ದರು ಎಂದು ಭೋಜನ ಕೂಟಕ್ಕೆ ಹೋಗಿದ್ದೆ. ಇದರಲ್ಲಿ ತಪ್ಪು ತಿಳಿಯುವುದು ಬೇಡ. ಇನ್ನು ಮುಂದೆ ಊಟಕ್ಕೆ ಕರೆದರೆ ಬರುವುದಿಲ್ಲ ಎಂದು ಹೇಳುತ್ತೇನೆ ನಗೆ ಚಟಾಕಿ ಹಾರಿಸಿದರು.

ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಆರ್‌.ಅಶೋಕ್‌, ರಮೇಶ್‌ ಜಾರಕಿಹೊಳಿ ಔತಣ ಕೂಟದಲ್ಲಿ ಯಾವ ಕಾರಣಕ್ಕೆ ಪಾಲ್ಗೊಂಡಿದ್ದರು ಎನ್ನುವ ಮಾತಿ ಇಲ್ಲ. ಮಹಾಂತೇಶ್‌ ಕವಟಗಿಮs… ಆಯೋಜಿಸಿದ್ದರಿಂದ ಪ್ರೀತಿ ಶ್ವಾಸದಿಂದ ಪಾಲ್ಗೊಂಡಿರಬೇಕು ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸತೀಶ್‌ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿರುವುದು ಕಾಂಗ್ರೆಸ್‌ ಶೀಘ್ರವೇ ಕುಮಾರಸ್ವಾುಗೆ ತಲಾಖ್‌ ಕೊಡಲಿದೆ. ಸೋಡಾ ಚೀಟಿ ಪಡೆಯಲು ಕುಮಾರಸ್ವಾು ಸಿದ್ದರಾಗಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸತೀಶ್‌ ಜಾರಕಿಹೊಳಿ ಸಿಎಂ ಆಗಬೇಕು ಎಂದು ಹೇಳಿದ್ದು, ಕಾಂಗ್ರೆಸ್‌ ಶೀಘ್ರವೇ ಕುಮಾರ ಸ್ವಾಮಿಗೆ ತಲಾಖ್‌ ಕೊಡಲಿದೆ. ಸೋಡಾ ಚೀಟಿ ಪಡೆಯಲು ಕುಮಾರಸ್ವಾಮಿ ಸಿದ್ದರಾಗಬೇಕು.
● ಆರ್‌.ಅಶೋಕ್‌, ಬಿಜೆಪಿ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next