Advertisement

15 ದಿನಗಳ ಒಳಗೆ ಕಟೀಲು ಮೇಳದ ಇಬ್ಬರ ಅಗಲುವಿಕೆ: ಪಟ್ಲ ಸತೀಶ್ ಶೆಟ್ಟಿ ಖೇದ

05:25 PM Dec 24, 2022 | Team Udayavani |

ಮಂಗಳೂರು : 15 ದಿನಗಳ ಒಳಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಇಬ್ಬರ ಅಗಲುವಿಕೆ ತೀವ್ರ ನೋವು ತಂದಿದೆ ಎಂದು ಖ್ಯಾತ ಭಾಗವತ, ಪಟ್ಲ ಫೌಂಡೇಶನ್ ನ ಪಟ್ಲ ಸತೀಶ್ ಶೆಟ್ಟಿ ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ‘ಬಹಳ ಬೇಸರದ ವಿಷಯ ಕಲಾವಿದನಿಗೆ ಒಳ್ಳೆಯ ಮರಣವಾದರೂ ಹೀಗೆ ಆಗಬಾರದು ಎಂದು ಆಶಿಸುತ್ತೇನೆ. ಪರಿಸ್ಥಿತಿ, ವಾತಾವರಣದ ದೋಷವೂ ಇರಬಹುದು. ಮುಂಚೆ ಇಂತಹ ಘಟನೆಗಳು ಇಷ್ಟು ಪಕ್ಕ ಪಕ್ಕನೆ ಕಟೀಲು ಮೇಳದಲ್ಲಿ ಆಗಿರಲಿಲ್ಲ, 15  ದಿನಗಳ ಒಳಗೆ ಇಬ್ಬರು ಸಾವನ್ನಪ್ಪಿದ್ದಾರೆ. ಯಾವ ಮೇಳ ಅನ್ನುವುದು ಮುಖ್ಯವಲ್ಲ. ಹಿಂದೆ ಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದರಾದ ಶಂಭು ಹೆಗಡೆ, ಗೇರು ಕಟ್ಟೆ ಗಂಗಯ್ಯ ಶೆಟ್ಟಿ ಸೇರಿ ಅನೇಕ ಕಲಾವಿದರು ಇದೆ ರೀತಿ ಮರಣವನ್ನಪ್ಪಿದ್ದರು’ ಎಂದರು.

‘ಕಲಾವಿದರು ಜಾಗರೂಕರಾಗಿ ತಮ್ಮ ಕಲಾ ಪ್ರೌಢಿಮೆ ತೋರಬೇಕು. ಕಲಾವಿದರಿಗೆ ಒತ್ತಡಗಳೂ ಇರಬಹುದು. ಒತ್ತಡಗಳನ್ನೂ ಕಡಿಮೆ ಮಾಡಬೇಕು ಎಂದು ನನ್ನ ವಿನಮ್ರ ಮನವಿ. ಆರೋಗ್ಯದಲ್ಲಿ ಏನಾದರೂ ಏರು ಪೇರಾದರೂ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಬೇಕು. ಸರಕಾರ ಕೂಡ ಕಲಾವಿದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.

‘ಸೌಕೂರು ಮೇಳದ ಇಬ್ಬರು ಕಲಾವಿದರು ಅಪಘಾತಕ್ಕೆ ಬಲಿಯಾಗಿದ್ದರು.ಅವರಿಗೆ ನಮ್ಮ ಫೌಂಡೇಶನ್ ನೆರವಿನಿಂದ 8 ಲಕ್ಷ ರೂ. ವಿಮೆಯನ್ನು ನೀಡಿದ್ದೆವು ಎಂದರು.

7 ವರ್ಷ ದಿಂದ 8.5 ಕೋಟಿ ರೂ. ಸಹಾಯ ಧನವನ್ನು ದಾನಿಗಳ ನೆರವಿನಿಂದ ನಮ್ಮ ಫೌಂಡೇಶನ್ ವತಿಯಿಂದ ಯಕ್ಷಗಾನ, ಭೂತಾರಾಧನೆ ಮತ್ತು ನಾಟಕ ರಂಗದ ಕಲಾವಿದರಿಗೆ ನೀಡಿದ್ದೇವೆ ಎಂದರು.

Advertisement

ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ಗುರುವಾರ (ಡಿ.22) ರಾತ್ರಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭದಲ್ಲಿ ರಂಗಸ್ಥಳದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಡಿ. 5 ರಂದು ಕಟೀಲು ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ ಅಚ್ಯುತ ನಾಯಕ್ ( 45) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next