Advertisement

Katapady: ಬೈಕ್‌ ಢಿಕ್ಕಿ; ಕೂಲಿ ಕಾರ್ಮಿಕನಿಗೆ ಗಾಯ

10:17 PM Mar 02, 2024 | Team Udayavani |

ಕಾಪು: ಬೈಕ್‌ ಢಿಕ್ಕಿ ಹೊಡೆದು ಕೂಲಿ ಕಾರ್ಮಿಕ ಗಾಯಗೊಂಡ ಘಟನೆ ರಾ.ಹೆ. 66ರ ಮೂಡಬೆಟ್ಟು ಅಂಬಿಕಾ ಟಿಂಬರ್ ಬಳಿ ಮಾ. 1ರಂದು ರಾತ್ರಿ ನಡೆದಿದೆ.

Advertisement

ಮೂಲತಃ ಕೊಪ್ಪಳ ನಿವಾಸಿ, ಪ್ರಸ್ತುತ ಕಟಪಾಡಿ ಪರಿಸರದಲ್ಲಿ ವಾಸಮಾಡಿಕೊಂಡಿರುವ ನೀಲಪ್ಪ (50) ಗಾಯಾಳು ಕೂಲಿ ಕಾರ್ಮಿಕ.

ವಾರದ ಹಿಂದೆ ಕೆಲಸದ ನಿಮಿತ್ತ ಕಟಪಾಡಿಗೆ ಆಗಮಿಸಿದ್ದ ನೀಲಪ್ಪ ಸಂಜೆ ಅಂಬಿಕಾ ಟಿಂಬರ್ ಬಳಿ ರಸ್ತೆ ದಾಟುತ್ತಿದ್ದಾಗ ಬೈಕ್‌ ಢಿಕ್ಕಿ ಹೊಡೆದಿತ್ತು. ಸ್ಥಳಕ್ಕೆ ಬಂದ ಸಾರ್ವಜನಿಕರು ಗಾಯಾಳುವನ್ನು ಉಪಚರಿಸಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್‌ ಸವಾರ ಪರಾರಿಯಾಗಿದ್ದಾನೆ.

ಗಾಯಳುವಿನ ಎಡಗೈ ಮೂಳೆ ಮುರಿತವಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next