Advertisement

ನೀರಜ್ ಚೋಪ್ರಾ ತರಬೇತುದಾರ ಕಾಶೀನಾಥ್‍ಗೆ ಶಿರಸಿಯಲ್ಲಿ ಸನ್ಮಾನ   

02:46 PM Aug 29, 2021 | Team Udayavani |

ಶಿರಸಿ : ಟೋಕಿಯೋ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ತರಬೇತುದಾರ ಶಿರಸಿಯ  ಕಾಶೀನಾಥ್ ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

Advertisement

ರಾಷ್ಟ್ರೀಯ ಕ್ರೀಡಾ ದಿನವಾದ ಭಾನುವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ‌ ಕಾಶೀನಾಥ್ ನಾಯಕ್ ಅವರಿಗೆ ಸನ್ಮಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ಕಾಶೀನಾಥ್ ಅವರು,  ಭಾರತೀಯ ಕೋಚ್ ಗಳಿಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಆದರೂ ಕೂಡ ನಾವು ನಮ್ಮ ದೇಶಕ್ಕಾಗಿ ಕೆಲಸ ಮಾಡಿದೆವು.ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಖುಷಿ ನೀಡಿದೆ.

ಇನ್ನು ಈ ಭಾಗದಲ್ಲಿ ಆಕಾಡೆಮಿ ತೆರೆಯುವ ಕನಸು ಹಂಚಿಕೊಂಡ ಕಾಶೀನಾಥ್, ನಮ್ಮ ಕಡೆಯ ಜನರು ಒಲಿಂಪಿಕ್ ನಲ್ಲಿ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಒಂದು ಆಕಾಡೆಮಿ ತೆರೆಯುವ ಕನಸು ನನ್ನಲ್ಲಿದೆ. ಇದಕ್ಕೆ ಸರ್ಕಾರದಿಂದ ಸಹಕಾರ ಕೂಡ ದೊರೆಯುವ ಭವವಸೆ ಇದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಡಿವೈಎಸ್ಪಿ ರವಿ‌ ನಾಯ್ಕ, ತಹಸೀಲ್ದಾರ ಕುಲಕರ್ಣಿ ಎಂ.ಆರ್ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next