Advertisement

ನಾಗ್ಪುರ: ಆರೆಸ್ಸೆಸ್‌ ಕೇಂದ್ರ ಕಚೇರಿಗೆ ಕಾಶೀ ಶ್ರೀ ಭೇಟಿ

12:25 AM Feb 16, 2023 | Team Udayavani |

ಮಂಗಳೂರು: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಗೆ ಕಾಶೀ ಮಠಾಧೀಶರಾದ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಬುಧವಾರ ಭೇಟಿ ನೀಡಿದರು.

Advertisement

ಇತ್ತೀಚೆಗೆ ಶ್ರೀಗಳು ಬೆಂಗಳೂರಿನ ಕಾಶೀಮಠದಲ್ಲಿ ಮೊಕ್ಕಾಂ ಇದ್ದಾಗ ಆರೆಸ್ಸೆಸ್‌ ಸರಸಂಘಚಾಲಕರಾದ ಮೋಹನ್‌ ಭಾಗವತ್‌ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಸಂಸ್ಕೃತ ಭಾರತಿಯ ಪ್ರಮುಖರಾದ ದಿನೇಶ್‌ ಕಾಮತ್‌, ವಿಶ್ವನಾಥ ಭಟ್‌, ರಾಧಾಕೃಷ್ಣ ಭಟ್‌, ಅಮಿತ್‌ ದಿನೇಶ್‌ ಪೈ ಮುಂಬಯಿ, ಮೋಹನದಾಸ್‌ ಮಲ್ಯ ಶ್ರೀಗಳ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next