Advertisement

ಕಾಸರಗೋಡು: ಎರೋಬಿಕ್‌ ಕಾಂಪೋಸ್ಟ್‌ ಸೌಲಭ್ಯ ಆರಂಭ

12:24 AM Jun 11, 2020 | Sriram |

ಕಾಸರಗೋಡು: ತಂಬೂರ್‌ ಮುಳಿ ಮಾದರಿಯ ಎರೋ ಬಿಕ್‌ ಕಾಂಪೋಸ್ಟ್‌ ಸೌಲಭ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭಗೊಂಡಿದೆ.

Advertisement

ಆರೋಗ್ಯ ಸುರಕ್ಷೆ ಖಚಿತ ಪಡಿಸಲು ಪರಿಸರ ಶುಚೀಕರಣ ಎಂಬ ಉದ್ದೇಶದೊಂದಿಗೆ ಚೆಂಗಳ ಗ್ರಾ.ಪಂ.ನ ವಾರ್ಷಿಕ ಯೋಜನೆಯಲ್ಲಿ ಜಿಲ್ಲಾ ಶುಚಿತ್ವ ಮಿಷನ್‌ ಈ ಸೌಲಭ್ಯವನ್ನು ನಿರ್ಮಿಸಿದೆ.

ಸಮಾರಂಭದಲ್ಲಿ ಡಿಸಿ ಡಾ| ಡಿ. ಸಜಿತ್‌ ಬಾಬು ಕಾಂಪೋಸ್ಟ್‌ ಸೌಲಭ್ಯವನ್ನು ಉದ್ಘಾಟಿಸಿದರು. ಹೆಚ್ಚುವರಿ ದಂಡಾ ಧಿಕಾರಿ ಎನ್‌. ದೇವಿದಾಸ್‌, ಜಿಲ್ಲಾ ಶುಚಿತ್ವ ಮಿಷನ್‌ ಸಂಚಾಲಕಿ ಎ. ಲಕ್ಷ್ಮೀ, ಸಹಾಯಕ ಸಂಚಾಲಕ ಪ್ರೇಮರಾಜನ್‌, ಕಾರ್ಯಕ್ರಮ ಅಧಿಕಾರಿ ಕೆ.ವಿ. ರಂಜಿತ್‌, ಎಸ್‌. ಇ.ಸಿ.ಎಫ್‌. ಜತೆ ನಿರ್ದೇಶಕ ಷಾಲಿಮಾರ್‌, ಕುಟುಂಬಶ್ರೀ ಜಿಲ್ಲಾ ಮಿಷನ್‌ ಸಂಚಾಲಕ ಟಿ.ಟಿ. ಸುರೇಂದ್ರನ್‌ ಮೊದಲಾದವರು ಉಪಸ್ಥಿತರಿದ್ದರು.

ಸಿವಿಲ್‌ ಸ್ಟೇಷನ್‌ ಸಿಬಂದಿ ನಡೆಸುವ ಜೈವಿಕ ತ್ಯಾಜ್ಯ ಸಂಗ್ರಹ ತೊಟ್ಟಿಗಳ ವಿತರಣೆಯ ಉದ್ಘಾಟನೆಯನ್ನು ಜಿಲ್ಲಾ ಶುಚಿತ್ವ ಮಿಷನ್‌ ಸಂಚಾಲಕಿ ಎ.ಲಕ್ಷ್ಮೀ ಅವರು ಹೆಚ್ಚುವರಿ ದಂಡನಾಧಿಕಾರಿಗೆ ಹಸ್ತಾಂತರಿಸುವ ಮೂಲಕ ನೆರವೇರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next