Advertisement

Kasaragod ಪತ್ನಿಯ ಕೊಲೆ: ಪತಿಗೆ ಜೀವಾವಧಿ ಸಜೆ, ದಂಡ

12:12 AM Oct 21, 2023 | Team Udayavani |

ಕಾಸರಗೋಡು: ಸೌದೆ ಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಪತಿ ಅಂಬಲತ್ತರ ಕಾಞರಡ್ಕ ಮೇಲೋತ್ತ್ ವೀಟಿಲ್‌ನ ಗೋಪಾಲಕೃಷ್ಣನ್‌ (76)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ) ಜೀವಾವಧಿ ಸಜೆ ಹಾಗು ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ದಂಡ ಪಾವತಿಸದಿದ್ದಲ್ಲಿ ಎರಡು ವರ್ಷ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. ಇದಲ್ಲದೆ ಪುತ್ರಿಗೆ ಹಲ್ಲೆ ಮಾಡಿದ್ದಕ್ಕೆ 12 ವರ್ಷ ಸಜೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಮೂರು ವರ್ಷ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

2019 ಡಿಸೆಂಬರ್‌ 3ರಂದು ಸಂಜೆ ಕಲ್ಯಾಣಿ (48) ಅವರನ್ನು ಸೌದೆಯಿಂದ ತಲೆಗೆ ಹೊಡೆದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪುತ್ರಿ ಶರಣ್ಯಾ (29) ಅವರಿಗೆ ಹಲ್ಲೆ ಮಾಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next