Advertisement

Kasaragod; ಸ್ಕೂಟರ್‌-ಕಾರು ಢಿಕ್ಕಿ ಇಬ್ಬರ ಸಾವು; ಐವರಿಗೆ ಗಾಯ

12:09 AM Jan 10, 2024 | Team Udayavani |

ಕಾಸರಗೋಡು: ಪೆರಿಯ ಬಳಿಯ ಕುಣಿಯದಲ್ಲಿ ಜ. 9ರಂದು ಬೆಳಗ್ಗೆ ಕಾರು-ಸ್ಕೂಟರ್‌ ಢಿಕ್ಕಿ ಹೊಡೆದು ಇಬ್ಬರು ಸಾವಿಗೀಡಾಗಿ, ಐವರು ಗಾಯ ಗೊಂಡಿದ್ದಾರೆ.

Advertisement

ನಿವೃತ್ತ ಸಿಪಿಸಿಆರ್‌ಐ ಸಿಬಂದಿ, ತಲಕ್ಲಾಯಿ ನಿವಾಸಿ ಎ. ನಾರಾಯಣನ್‌ ನಾಯರ್‌ (65) ಮತ್ತು ಸಂಬಂಧಿಕ ಚಟ್ಟಂಚಾಲ್‌ನ ಗೋಪಾಲ ಕೃಷ್ಣನ್‌ ನಾಯರ್‌(58) ಸಾವಿಗೀಡಾದವರು.

ಸ್ಕೂಟರ್‌ಗೆ ಢಿಕ್ಕಿ ಹೊಡೆದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿತು. ಇದೇ ವೇಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹಂಸ ಮತ್ತು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next