Advertisement

Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್‌ಲೈನ್‌ ವಂಚನೆ ಆರೋಪಿ ಪರಾರಿ

08:08 PM Sep 05, 2024 | Team Udayavani |

ಕಾಸರಗೋಡು: ಆನ್‌ಲೈನ್‌ ಟ್ರೇಡಿಂಗ್‌ ವ್ಯಾಪಾರದ ಹೆಸರಿನಲ್ಲಿ ಹಣ ಎಗರಿಸಿದ ಪ್ರಕರಣದ ಆರೋಪಿ ಬಾದುಷಾನ, ತನ್ನನ್ನು ಬಂಧಿಸಲು ಬಂದ ಇನ್‌ಸ್ಪೆಕ್ಟರ್‌ಗಳನ್ನೊಳಗೊಂಡ ಪೊಲೀಸರಿಗೆ ಕಾರು ಢಿಕ್ಕಿ ಹೊಡೆಸಿ ಗಾಯಗೊಳಿಸಿ ಪರಾರಿಯಾದ ಘಟನೆ ಮೇಲ್ಪರಂಬ ಬದ ಕೈನೋತ್ತ್ನಲ್ಲಿ ನಡೆದಿದೆ.

Advertisement

ಪಾಲ್ಘಾಟ್‌ ಜಿಲ್ಲೆಯ ಮಂಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಪಿ.ಪ್ರತಾಪ್‌, ಸಿವಿಲ್‌ ಪೊಲೀಸ್‌ ಆಫೀಸರ್‌ಗಳಾದ ಸಿ.ಸುಧೀಶ್‌, ಕೆ.ಸತೀಶ್‌ ಕುಮಾರ್‌ ಅವರಿಗೆ ಆರೋಪಿ ಕಾರು ಢಿಕ್ಕಿ ಹೊಡೆಸಿದ್ದಾನೆ.

ಈತನ ವಿರುದ್ಧ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಗಾಯಾಳು ಪೊಲೀಸರಿಗೆ ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಆನ್‌ಲೈನ್‌ ಟ್ರೇಡಿಂಗ್‌ನ ಮೂಲಕ ಭಾರೀ ಲಾಭ ನೀಡಲಾಗುವುದೆಂದು ನಂಬಿಸಿ ಪಾಲ್ಘಾಟ್‌ ನ ಮಣ್ಣೂರು ನಿವಾಸಿ ಮೋಸನದಾಸ್‌ ಅವರಿಂದ ಆನ್‌ಲೈನ್‌ ಮೂಲಕ 3.24 ಲಕ್ಷ ರೂ. ಪಡೆದು ವಂಚಿಸಿದ ದೂರಿನಂತೆ ಮಂಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next