Advertisement

Kasaragod ಅಪಾಯಕಾರಿ ರೀತಿ ಕಾರು ಚಲಾಯಿಸಿದ ಐವರು ಪೊಲೀಸ್‌ ವಶಕ್ಕೆ

11:27 PM Aug 25, 2024 | Team Udayavani |

ಕಾಸರಗೋಡು: ರಾಷಾರೋಷವಾಗಿ ಕಾರು ಚಲಾಯಿಸಿದ ಆರೋಪದಲ್ಲಿ ಕರ್ನಾಟಕದ ನಿವಾಸಿಗಳಾದ ಐವರು ವಿದ್ಯಾರ್ಥಿ ಗಳನ್ನು ರಾಜಪುರಂ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಅವರು ಪ್ರಯಾಣಿಸಿದ ಕಾರನ್ನು ವಶವಡಿಸಲಾಗಿದೆ.

Advertisement

ರಾಣಿಪುರದಿಂದ ಪನತ್ತಡಿಗೆ ಪ್ರಯಾಣಿಸುವಾಗ ಕಾರಿನ ಢಿಕ್ಕಿ ತೆರೆದು ಅಲ್ಲಿ ಕುಳಿತುಕೊಂಡು ವಿದ್ಯಾರ್ಥಿಗಳು ಪ್ರಯಾಣಿಸಿದ್ದರು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಪೊಲೀಸರು ಈ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಪ್ರದೇಶದಲ್ಲಿ ನಿರಂತರ ವಾಹನ ಅಪಘಾತವಾಗುತ್ತಿದ್ದು, ಅಪಾಯ ಕಾರಿ ರೀತಿಯಲ್ಲಿ ಅವರು ಕಾರು ಓಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next