Advertisement

ಇದು ಹೆದ್ದಾರಿ ದುರವಸ್ಥೆ !

06:00 AM Jul 02, 2018 | Team Udayavani |

ಕಾಸರಗೋಡು: ಮಳೆಗಾಲ ಪ್ರಾರಂಭಗೊಂಡ ಬಳಿಕ ಕಾಸರಗೋಡು – ಕುಂಬಳೆ ನಡುವಿನ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದೆ. ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ, ಬಸ್‌ಗಳಿಗೆ ಹಾಗೂ ಇತರ ವಾಹನಗಳಿಗೆ ಹೈವೇಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ.

Advertisement

ಬೃಹತ್‌ ಗಾತ್ರದ ಹೊಂಡಗಳಿಂದಾಗಿ ಈ ರಸ್ತೆಯಲ್ಲಿ  ಸಂಚರಿಸುವ ದ್ವಿಚಕ್ರ ವಾಹನಗಳು ಮಗುಚಿ ಬೀಳುವ ಸಾಧ್ಯತೆಯೂ ಇದ್ದು, ಇದು ವಾಹನ ಚಾಲಕರನ್ನು  ತೀವ್ರ ಸಂಕಷ್ಟಕ್ಕೆ ಸಿಲುಕಿ ಸುತ್ತಿದೆ. ಹೊಂಡದಲ್ಲಿ  ಮಳೆ ನೀರು ತುಂಬಿಕೊಂಡಿದ್ದು, ಇದರಿಂದ ಸಂಚಾರ ಅತ್ಯಂತ ದುಸ್ತರವಾಗುತ್ತಿದೆ. ಅಲ್ಲದೆ ಅಲ್ಲಲ್ಲಿ  ಹೊಂಡಗಳು ಇರುವುದರಿಂದ ವಾಹನಗಳು ನಿಧಾನವಾಗಿ ಚಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತಬೈಲ್‌ನಲ್ಲಿ ಬೃಹತ್‌ ಗಾತ್ರದ ಹೊಂಡಗಳು ಸೃಷ್ಟಿಯಾಗಿದ್ದು, ಇದರಿಂದ ಈ ದಾರಿಯಾಗಿ ಸಂಚರಿಸುವ ವಾಹನ ಚಾಲಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೊಂಡಗಳನ್ನು  ಕೂಡಲೇ ದುರಸ್ತಿಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಾಹನ ಚಾಲಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next