Advertisement

Kasaragod ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು: ಗಾಯ

12:19 AM Sep 28, 2023 | Team Udayavani |

ಕಾಸರಗೋಡು: ಚೆಮ್ನಾಡ್‌ ಲೇಸ್ಯತ್‌ ತಿರುವಿನಲ್ಲಿ ಕಾರು ಮಗುಚಿ ಬಿದ್ದು ಅಸಿಸ್ಟೆಂಟ್‌ ಕಲೆಕ್ಟರ್‌ ಜೆಂಗನಾಶೆÏàರಿ ನಿವಾಸಿ ದಿಲೀಪ್‌ ಕೆ.ಕೈನಿಕರ (29) ಮತ್ತು ಅವರ ಗನ್‌ಮ್ಯಾನ್‌ ಚೆರ್ವತ್ತೂರು ನಿವಾಸಿ ರಂಜಿತ್‌ ಕುಮಾರ್‌ (31) ಗಾಯಗೊಂಡಿದ್ದಾರೆ. ಇವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕಾರು ಚಾಲಕ ಬೋವಿಕ್ಕಾನದ ಗೋಪಾಲನ್‌(50) ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಡಿಜಿಟಲ್‌ ಸರ್ವೆಯಂಗವಾಗಿ ಅಸಿಸ್ಟೆಂಟ್‌ ಕಲೆಕ್ಟರ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಮಗುಚಿ ಬಿತ್ತು. ಗಾಯಾಳುಗಳನ್ನು ಕೂಡಲೇ ಸ್ಥಳೀಯರು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next