Advertisement

Kasaragod ಅಪರಾಧ ಸುದ್ದಿಗಳು

08:45 PM Sep 18, 2024 | Team Udayavani |

9.12 ಲಕ್ಷ ರೂ. ಕಾಳಧನ ವಶ
ಕಾಸರಗೋಡು: ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸುತ್ತಿದ್ದ 9.12 ಲಕ್ಷ ರೂ.ಯನ್ನು ಚಂದೇರ ಪೊಲೀಸರು ಪಡನ್ನದಿಂದ ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಪಡನ್ನ ನಿವಾಸಿ ಮುಹಮ್ಮದ್‌ ಹಾಶಿಂನಿಂದ ವಶಪಡಿಸಿಕೊಳ್ಳಲಾಗಿದೆ

Advertisement

ಪೊಲೀಸರಿಗೆ ಕಲ್ಲೆಸೆತ : ಕೇಸು ದಾಖಲು
ಕಾಸರಗೋಡು: ತಂಡಗಳ ನಡುವೆ ಮೀಪುಗುರಿಯಲ್ಲಿ ನಡೆಯುತ್ತಿದ್ದ ಜಗಳವನ್ನು ತಡೆಯಲು ಬಂದಿದ್ದ ಪೊಲೀಸರಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. ಕೆಲವರು ಕಾಂಕ್ರೀಟ್‌ ತುಂಡು ಹಾಗೂ ಕಲ್ಲುಗಳನ್ನು ಪೊಲೀಸರ ಮೇಲೆ ಎಸೆದಿದ್ದು, ಪರಿಣಾಮವಾಗಿ ಎಸ್‌ಐ ಪಿ.ಅನೂಪ್‌ ಗಾಯಗೊಂಡಿದ್ದರು.

ಚಂದ್ರಗಿರಿ: ಜ್ವರದಿಂದ ವಿದ್ಯಾರ್ಥಿನಿ ಸಾವು
ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಚಂದ್ರಗಿರಿ ಶಾಲೆಯ ಪ್ಲಸ್‌ ಟು ವಿದ್ಯಾರ್ಥಿನಿ ಎಸ್‌.ಎಂ.ವೈಷ್ಣವಿ (17) ಅವರು ಕಲ್ಲಿಕೋಟೆ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next