Advertisement

Crime News ಕಾಸರಗೋಡು ಅಪರಾಧ ಸುದ್ದಿಗಳು

06:14 PM Nov 04, 2023 | Team Udayavani |

ಬಸ್‌ ಢಿಕ್ಕಿ: ಸ್ಕೂಟರ್‌
ಸವಾರನ ಸಾವು
ಬೋವಿಕ್ಕಾನ: ಕಾನತ್ತೂರು-ಬೋವಿಕ್ಕಾನ ರಸ್ತೆಯ ಚಿಪ್ಲಿಕಯದಲ್ಲಿ ಖಾಸಗಿ ಬಸ್‌ ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಪಡನ್ನ ಕೊನ್ನಕ್ಕಾಡ್‌ ಅಶೋಕಚ್ಚಾಲಿನ ಕಳತ್ತುವಾದುಕಲ್‌ ಶರತ್‌ ದಾಮೋದರನ್‌ (26) ಸಾವಿಗೀಡಾದರು. ಗಂಭೀರ ಗಾಯಗೊಂಡ ಶರತ್‌ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಹೊಂಡದಲ್ಲಿ ಯುವಕನ ಶವ ಪತ್ತೆ
ಕಾಸರಗೋಡು: ರಸ್ತೆ ಮಧ್ಯೆ ಸಂಕ ನಿರ್ಮಿಸಲೆಂದು ಹೊಸದುರ್ಗ ಅಲಾಮಿಪಳ್ಳಿಯಲ್ಲಿ ತೋಡಲಾದ ನೀರು ತುಂಬಿದ ಹೊಂಡದಲ್ಲಿ ಹೊಸದುರ್ಗ ಕೊವ್ವಲ್‌ಪಳ್ಳಿಯ ನಿಧೀಶ್‌ (35) ಅವರ ಮೃತದೇಹ ಪತ್ತೆಯಾಗಿದೆ. ಅವರು ಈ ಹೊಂಡಕ್ಕೆ ಬಿದ್ದುದಾದರೂ ಹೇಗೆ ಎಂಬ ಬಗ್ಗೆ ಹೊಸದುರ್ಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಷರತ್ತು ಪಾಲಿಸದೆ ಕಾರ್ಯಾಚರಿಸುತ್ತಿದ್ದ
ಮಸಾಜ್‌ ಸೆಂಟರ್‌ಗೆ ಬೀಗ
ಕಾಸರಗೋಡು: ಷರತ್ತುಗಳನ್ನು ಪಾಲಿಸದೆ ಕಾರ್ಯಾಚರಿಸುತ್ತಿದ್ದ ಮಸಾಜ್‌ ಕೇಂದ್ರವನ್ನು ಪೊಲೀಸರು ಮುಚ್ಚುಗಡೆಗೊಳಿಸಿದ್ದಾರೆ. ಕಾಸರಗೋಡು ಹಳೆ ಬಸ್‌ ನಿಲ್ದಾಣ ಸಮೀಪದ ಬಹುಮಹಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕೇಂದ್ರವನ್ನು ನಗರ ಠಾಣೆ ಪೊಲೀಸರು ಮುಚ್ಚುಗಡೆಗೊಳಿಸಿದ್ದಾರೆ.

ಮಸಾಜ್‌ ಸೆಂಟರ್‌ ಕಾರ್ಯಾಚರಿಸುವುದಕ್ಕೆ ಸಂಸ್ಥೆಗೆ ಪರವಾನಗಿ ಇದ್ದರೂ ಇತರ ನಿಬಂಧನೆಗಳನ್ನು ಪಾಲಿಸಲಾಗುತ್ತಿರಲಿಲ್ಲವೆಂದು ಸೂಚಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕಾನೂನು ಪ್ರಕಾರ ಮಸಾಜ್‌ ಕೇಂದ್ರ ಕಾರ್ಯಾಚರಿಸಬೇಕಿದ್ದರೆ ಲೈಸನ್ಸ್‌ ಹೊರತಾಗಿ ಮೆಡಿಕಲ್‌ ಪ್ರಮಾಣಪತ್ರ, ಮೆಡಿಕಲ್‌ ಕಾರ್ಡ್‌, ಡರ್ಮಟೋಲಜಿ ವಿಷಯಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿಯ ಒಪ್ಪಿಗೆ ಬೇಕಾಗಿದೆ. ಇದ್ಯಾವುದೂ ಇಲ್ಲದೆ ಕೇಂದ್ರ ಕಾರ್ಯಾಚರಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next