Advertisement

ಕಸಾಪ ಅಭ್ಯರ್ಥಿ ನಿರಗುಡಿ ಪ್ರಚಾರ

11:47 AM Nov 09, 2021 | Team Udayavani |

ಆಳಂದ: ನ.21ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನದ ಚುನಾವಣೆಯ ಅಭ್ಯರ್ಥಿ ಬಿ.ಎಚ್‌. ನಿರಗುಡಿ ಅವರು ತಾಲೂಕಿನ ಹಲವಡೆ ತಮ್ಮ ಬೆಂಬಲಿಗರೊಂದಿಗೆ ಮತದಾರರ ಮನೆ-ಮನೆಗೆ ತೆರಳಿ ಮತಯಾಚನೆ ನಡೆಸಿದರು.

Advertisement

ಸರಸಂಬಾ, ಕಿಣ್ಣಿ ಸುಲ್ತಾನ್‌, ಸಕ್ಕರಗಾ, ಖಜೂರಿ, ಆಳಂದ ಪಟ್ಟಣ ಸೇರಿ ಮತ್ತಿತರ ಕಡೆ ಕಸಾಪ ಮತದಾರರಲ್ಲಿ ತೆರಳಿದ ನಿರಗುಡಿ ಅವರು, ಇದೊಂದು ಬಾರಿ ಜಿಲ್ಲಾ ಕಸಾಪ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಬಿ.ಎಚ್‌. ನಿರಗುಡಿ, ಜಿಲ್ಲಾದ್ಯಂತ 3ನೇ ಹಂತದ ಪ್ರವಾಸ ಕೈಗೊಂಡಿದ್ದು, ಮತದಾರರು ಹೆಚ್ಚಿನ ಮತಗಳನ್ನು ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಆಳಂದ ತಾಲೂಕಿನಿಂದ ಹೆಚ್ಚಿನ ಮತಗಳ ಪಡೆದು ಗೆಲ್ಲುವ ಆಸೆಯಿದೆ. ಇದಕ್ಕೆ ತಾಲೂಕಿನ ಮತದಾರರು ಸಹ ಹುಮ್ಮಸ್ಸು ತೋರಿಸಿದ್ದಾರೆ ಎಂದರು.

ಸರಸಂಬಾ ಗ್ರಾಮದಲ್ಲಿ ಸಹಕಾರಿ ಧುರೀಣ ಹಾಗೂ ಕಸಾಪ ಸದಸ್ಯ ಮಹಾಂತಪ್ಪ ಆಲೂರ, ಪ್ರಕಾಶ ಕುಂಬಾರ, ವಿಜಯಕುಮಾರ ಗುಂಜೋಟಿ, ಶಿವಲಿಂಗಪ್ಪ ಕುಂಬಾರ, ಪರಮೇಶ್ವರ ಗೌಂಡಿ, ಸುರೇಶ ಕಾಳೆ, ನಾಮದೇವ ಶಖಾಪುರೆ ಮತ್ತಿತರು ನಿರಗುಡಿ ಅವರನ್ನು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದರು. ಪ್ರಮುಖ ರಾಜೇಂದ್ರ ಯರನಾಳೆ, ಜಿ.ಎಸ್‌. ಮಾಲಿಪಾಟೀಲ, ಶರಣಗೌಡ ಪಾಳಾ, ಲಾಡಪ್ಪ ಮೂಲಗೆ, ಸಿದ್ರಾಮ ಬೇತಾಳೆ ಮತ್ತಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next