Advertisement

Karwar: ಅಪಾಯಕ್ಕೆ ಸಿಲುಕಿದ ಮಂಗಳೂರಿನ 7 ಮೀನುಗಾರರ ರಕ್ಷಿಸಿದ ಕೋಸ್ಟ್ ಗಾರ್ಡ್

08:18 PM Jan 17, 2024 | Team Udayavani |

ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ನಲ್ಲಿ ನೀರು ನುಗ್ಗಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಕಾರವಾರದ ಬೈತ್ ಖೋಲ್ ಬಂದರಿನಲ್ಲಿ ಬುಧವಾರ ನಡೆದಿದೆ.

Advertisement

ಮಂಗಳೂರಿನ ಏಳು ಮಂದಿ ಮೀನುಗಾರರಿದ್ದ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ರಾಯಲ್ ಬ್ಲ್ಯೂ, ಕಾರವಾರದ ಬೈತಖೋಲ್ ಬಂದರಿನಿಂದ 40 ನಾಟಿಕಲ್ ಮೈಲು ದೂರದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಅಪಾಯಕ್ಕೆ ಸಿಲುಕಿತ್ತು.

ಇದರಿಂದಾಗಿ ಆತಂಕಕ್ಕೊಳಗಾದ ಮೀನುಗಾರರು ಕರಾವಳಿ ಕಾವಲು ಪೊಲೀಸ್, ಕೋಸ್ಟ್ ಗಾರ್ಡ್ ಗೆ ಸಂದೇಶ ರವಾನಿಸಿದ್ದರು. ಬೋಟ್ ಒಳಗಡೆ ನೀರು ನುಗ್ಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಹಾಗೂ ಗೋವಾ ಕೋಸ್ಟ್ ಗಾರ್ಡ್ ರಕ್ಷಣ ಕಾರ್ಯಾಚರಣೆಗೆ ಮುಂದಾಗಿತ್ತು. ಕೊನೆಗೆ ಆರು ಬೋಟ್ ಗಳ ಸಹಾಯದಿಂದ ಮುಳುಗುತ್ತಿದ್ದ ಬೋಟನ್ನು ಎಳೆದು ಕಾರವಾರದ ಬಂದರಿಗೆ ತರಲಾಗಿದ್ದು, ಮೀನುಗಾರರು ಸುರಕ್ಷಿತವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next