Advertisement

ಮಹಿಳಾ ಮೀಸಲಾತಿ ಜಾರಿಯಾಗಲಿ : ಕರುಣಾಕರನ್‌ ಆಗ್ರಹ

12:35 AM Mar 09, 2019 | |

ಕಾಸರಗೋಡು: ಮಹಿಳೆಯರ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಬೇಕು ಎಂದು ಸಂಸದ ಪಿ.ಕರುಣಾಕರನ್‌ ಆಗ್ರಹಿಸಿದರು.

Advertisement

ಮಹಿಳಾ, ಶಿಶು ಕಲ್ಯಾಣ ಇಲಾಖೆ ವತಿಯಿಂದ ಡಿ.ಪಿ.ಸಿ. ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಬೇಕು ಎಂಬ ಸಮಾಜಿಕ ದೃಷ್ಟಿಕೋನ ಬದಲಾಗಬೇಕು ಮಹಿಳೆಯರ ಹಕ್ಕಿನ ಬಗ್ಗೆ ಜಾಗೃತಿ ಮೂಡಬೇಕು. ಅನೀತಿ ಮತ್ತು ದೌರ್ಜನ್ಯ ವಿರುದ್ಧ ಧ್ವನಿ ಎತ್ತುವ ಬಲ ಮಹಿಳೆಯರಿಗೆ ಬರಬೇಕು ಎಂˆದುರುಣಾಕರನ್‌ರ ನುಡಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್‌ ಸದಸ್ಯೆ ಇ.ಪದ್ಮಾವತಿ, ಮಹಿಳಾ ಸಂರಕ್ಷಣೆ ಅ ಧಿಕಾರಿ ಪ್ರಮೀಳಾ ಎ.ಎಸ್‌., ಸಿ.ಡಿ.ಪಿ.ಒ. ನಿಷಾ ಎನ್‌., ಜಿಲ್ಲಾ ಶಿಶು ಸಂರಕ್ಷಣೆ ಅ ಧಿಕಾರಿ ಪಿ.ಬಿಜು, ಜಿಲ್ಲಾ ಕಾರ್ಯಕ್ರಮ ಅ ಧಿಕಾರಿ ಉಷಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು. ಮಹಿಳೆಯರ ಸಂರಕ್ಷಣೆ  ಮತ್ತು ಕಾನೂನು ವಿಷಯದಲ್ಲಿ ನ್ಯಾಯವಾದಿ ಸರಿತಾ ತರಗತಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next