Advertisement

ಕಾರ್ತಿಯನ್ನು ಮುಂಬಯಿಗೆ ಕರೆತಂದ ಸಿಬಿಐ;ಇಂದ್ರಾಣಿ ಮುಖಾಮುಖಿ 

11:41 AM Mar 04, 2018 | |

ಮುಂಬಯಿ: ಐಎನ್‌ಎಕ್ಸ್‌ ಮೀಡಿಯಾ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಕಾರ್ತಿ ಚಿದಂಬರಂನನ್ನು ಭಾನುವಾರ ಸಿಬಿಐ ಅಧಿಕಾರಿಗಳು ಮುಂಬಯಿಗೆ ಕರೆತಂದಿದ್ದಾರೆ.  

Advertisement

ಮಹತ್ವದ ತನಿಖೆ ನಡೆಸುತ್ತಿರುವ ಸಿಬಿಐ ಏರ್‌ ಇಂಡಿಯಾ ವಿಮಾನದಲ್ಲಿ ಭಾನುವಾರ ಬೆಳಗ್ಗೆ ಮುಂಬಯಿಗೆ ಕರೆತಂದಿದ್ದು, ಹಗರಣದ ಇನ್ನಿಬ್ಬರು ಆರೋಪಿಗಳಾದ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್‌ ಮುಖರ್ಜಿ ಅವರೊಂದಿಗೆ ಜೈಲಿನಲ್ಲಿ ಪ್ರತ್ಯೇಕವಾಗಿ ಮುಖಾಮುಖಿಯಾಗಿಸಿ ವಿಚಾರಣೆ ನಡೆಸುತ್ತಿರುವುದಾಗಿ ಎಂದು ತಿಳಿದು ಬಂದಿದೆ.

ದೆಹಲಿಯ ಪಟಿಯಾಲಾ ಹೌಸ್‌ ಕೋರ್ಟ್‌ ಮಾರ್ಚ್‌ 1 ರಂದು ಕಾರ್ತಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next