Advertisement

ಮದುವೆ ಆಗುವವರಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ: ಸಪ್ತಪದಿ ಸರಳ ವಿವಾಹಕ್ಕೆ ಅರ್ಜಿ ಅಹ್ವಾನ

04:37 PM Jun 20, 2020 | sudhir |

ಬೆಂಗಳೂರು : ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ಬಹುತೇಕ ನಿಗದಿಯಾಗಿದ್ದ ಮದುವೆಗಳನ್ನು ಮುಂದೂಡಲ್ಪಟ್ಟಿವೆ, ಅದರ ಜೊತೆಗೆ ಸರಕಾರದಿಂದ ನಡೆಸಲ್ಪಡುವ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳನ್ನು ಮುಂದೂಡಲಾಯಿತು. ಆದರೆ ಸರಕಾರ ಈಗ ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕಾಗಿ ಮತ್ತೆ ಅರ್ಜಿಗಳನ್ನು ಆಹ್ವಾನಿಸಿದೆ.

Advertisement

ಸರಕಾರ ಈ ಕುರಿತಾಗಿ ಏಳು ಹಂತಗಳಲ್ಲಿ ಮದುವೆ ನಡೆಸಲು ಚಿಂತಿಸಿದೆ ಅದರಂತೆ ಜುಲೈ ತಿಂಗಳ 23, 26 ಮತ್ತು 29 ರಂದು ಮೂರು ಹಂತದಲ್ಲಿ ನಡೆದರೆ ಆಗಸ್ಟ್ ತಿಂಗಳ 6,10, 14 ಮತ್ತು 17 ತಾರೀಕಿನಂದು ಮತ್ತೆ ನಾಲ್ಕು ಹಂತದಲ್ಲಿ ಸಾಮೂಹಿಕ ಮದುವೆ ನಡೆಯಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಶನಿವಾರ ಅಧಿಕೃತ ಆದೇಶವನ್ನು ಹೊರಡಿಸಿದೆ.

ಏನೆಲ್ಲಾ ಸಿಗಲಿದೆ :
ಮುಜರಾಯಿ ಇಲಾಖೆಯಿಂದ ನಡೆಯುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಸೇರಿ, ವಧೂವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗಾಗಿ 55,000 ರೂ.ಗಳನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ.

ವರನಿಗೆ ಪಂಚೆ – ಶರ್ಟ್ ಹಾಗೂ ಶಲ್ಯ ನೀಡಲಾಗುತ್ತದೆ. ವಧುವಿಗೆ ಧಾರೆ ಸೀರೆ, ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next