Advertisement

ಇನ್ನೂ ನಾಲ್ವರು ಬಂದು ಸೇರುತ್ತಾರೆ; ಜಾರಕಿಹೊಳಿ ಇನ್ನೊಂದು ಬಾಂಬ್‌

10:51 AM Jul 11, 2019 | Team Udayavani |

ಮುಂಬಯಿ : ‘ಯಾವುದೇ ಕಾರಣಕ್ಕೂ ನಾವು ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನ ಭೇಟಿ ಮಾಡುವುದಿಲ್ಲ, ಸಾಕಷ್ಟು ತೊಂದರೆ ನೀಡಿದ್ದಾರೆ. ಇನ್ನುನಮಗೆ ತೊಂದರೆ ನೀಡುವುದು ಬೇಡ’ ಎಂದು ರೆಬೆಲ್‌ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದ ಟ್ರಬಲ್‌ ಶೂಟರ್‌ ಆಗಿರುವ ಡಿ.ಕೆ.ಶಿವಕುಮಾರ್‌ ಅವರು ಮುಂಬಯಿಯ ರಿನಾಯ್‌ಸೆನ್ಸ್‌ ಹೊಟೇಲ್‌ನಲ್ಲಿ  ಕಾಂಗ್ರೆಸ್‌-ಜೆಡಿಎಸ್‌ನ 10 ಮಂದಿ ಅತೃಪ್ತ ಶಾಸಕರ ಭೇಟಿಗೆ ಮುಂದಾದ ಬೆನ್ನಲ್ಲೇ ಜಾರಕಿಹೊಳಿ ಈ ಹೇಳಿಕೆ ನೀಡಿದ್ದಾರೆ.

‘ಡಿಕೆಶಿ ಒಂದು ಕಾಲದಲ್ಲಿ ನನ್ನ ಆತ್ಮೀಯ ಸ್ನೇಹಿತ, ಈಗ ಯಾವುದೇ ಮಾತುಕತೆ ನಡೆಸುವುದು ಬೇಡ. ನಮಗೆ ಅವರೊಂದಿಗೆ ಮುಂದುವರಿಯುವುದು ಇಷ್ಟವಿಲ್ಲ.ಅವನಿಗೆ ದೇವರು ಒಳ್ಳೆಯದು ಮಾಡಲಿ’ ಎಂದರು.

‘ನಮ್ಮನ್ನು ಬಿಜೆಪಿಯವರು ಕರೆ ತಂದಿಲ್ಲ. ನಾವು ನಮ್ಮ ಸ್ವಂತ ಕರ್ಚಿನಲ್ಲಿ ಬಂದಿದ್ದೇವೆ. ನಮ್ಮನ್ನು ಬೆಳೆಸಿದವರು ಸಿದ್ದರಾಮಯ್ಯ , ಅವರು ಎಲ್ಲಿಯೇ ಇದ್ದರೂ ನಮ್ಮ ನಾಯಕರು, ಅವರು ಸುಳ್ಳು ಹೇಳುವವರಲ್ಲ’ ಎಂದರು.

‘ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಮೇಲೆ ಬಹಳ ಗೌರವವಿದೆ . ತಕ್ಷಣ ನಮ್ಮ ರಾಜೀನಾಮೆಯನ್ನು ಅಂಗೀಕರಿಸಿ’ ಎಂದು ಮನವಿ ಮಾಡಿದ್ದಾರೆ.

Advertisement

ಇನ್ನೂ ನಾಲ್ಕು ಮಂದಿ ಶಾಸಕರು ಬಂದು ನಮ್ಮನ್ನು ಸೇರಲಿದ್ದಾರೆ ಎಂದು ಬಾಂಬ್‌ ಸಿಡಿಸಿದರು.

ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು ಸಚಿವಡಿ.ಕೆ.ಶಿವಕುಮಾರ್‌ ಅವರೊಂದಿಗೆ ಮುಂಬಯಿಗೆ ತೆರಳಿದ್ದು, ಮೂವರಿಗೂ ಹೊಟೇಲ್‌ ಪ್ರವೇಶಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಅತೃಪ್ತ ಶಾಸಕರು ಡಿ.ಕೆ.ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಲತ್ಕಾರಯುತವಾಗಿ ನಮ್ಮನ್ನು ಕರೆದೊಯ್ಯುತ್ತಾರೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ ತಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next