Advertisement

ಗ್ರಾ.ಪಂ. ಸ್ವಾರಸ್ಯ-ನಾಡ, ಮುಂಡ್ಕೂರು: ಒಂದು ಮತದ ಗೆಲುವು, ತಾಯಿಗೆ ಜಯ, ಮಗನಿಗೆ ಸೋಲು!

02:18 PM Dec 30, 2020 | Team Udayavani |

ಮಣಿಪಾಲ: ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿ ಪರಿಗಣಿಸಲ್ಪಟ್ಟಿರುವ ಗ್ರಾಮ ಪಂಚಾಯ್ತಿ ಚುನಾವಣೆಯ ಮತಎಣಿಕೆ ಬಿರುಸುಗೊಂಡಿದ್ದು, ಏತನ್ಮಧ್ಯೆ ಕೆಲವು ಕುತೂಹಲಕಾರಿ ಘಟನೆ ನಡೆದಿದೆ.

Advertisement

ಒಂದು ಮತದ ಅಂತರದಿಂದ ಗೆದ್ದ ಅದೃಷ್ಟಶಾಲಿಗಳು!

ಬೆಳ್ಮಣ್ಣು ಮುಂಡ್ಕೂರು ಗ್ರಾಮ ಪಂಚಾಯ್ತಿಯ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಸರಳ ಶೆಟ್ಟಿ 339 ಮತ ಪಡೆದಿದ್ದು, ಪ್ರತಿಸ್ಪರ್ಧಿ ಪ್ರೇಮಾ ಶೆಟ್ಟಿ340 ಮತ ಗಳಿಸಿ ಕೇವಲ ಒಂದು ಮತದ ಅಂತರದಿಂದ ಜಯಗಳಿಸಿದ್ದಾರೆ.

ನಾಡ ಗ್ರಾ.ಪಂನಲ್ಲಿ ಗೆಲುವು ತಂದ 1 ಮತ:

ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಂದ್ರಶೇಖರ್ ಆಚಾರ್ಯ ಒಂದು ಮತದ ಅಂತರದಿಂದ ಜಯ ಸಾಧಿಸಿದ್ದಾರೆ. ಚಂದ್ರಶೇಖರ್ 170 ಮತ ಪಡೆದಿದ್ದು, ಪ್ರತಿಸ್ಪರ್ಧಿ ರಾಜು ಭಂಡಾರಿ 169 ಮತ ಗಳಿಸಿ ಪರಾಜಯಗೊಂಡಿದ್ದಾರೆ.

Advertisement

ಒಂದು ಮತದ ಗೆಲುವು:

ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮ ಪಂಚಾಯ್ತಿಯ ಬಸ್ತಿಹಳ್ಳಿ ಗ್ರಾಮದ ಶಾಂತಕುಮಾರ್ ಅವರು ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಮಬಲದ ಫಲಿತಾಂಶ- ಟಾಸ್ ನಲ್ಲಿ ಗೆದ್ದ ಅಭ್ಯರ್ಥಿ:

ಬಾಗಲಕೋಟೆ ಜಿಲ್ಲೆಯ ಗೊರಬಾಳ ಗ್ರಾಮ ಪಂಚಾಯ್ತಿಯ ಫಲಿತಾಂಶ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಇಲ್ಲಿನ ಗೋಪಶಾನಿ ವಾರ್ಡ್ ನ ಇಬ್ಬರು ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರು.

ಗೋಪಶಾನಿ ವಾರ್ಡ್ ನ ಮಹಾಂತೇಶ್ ಮತ್ತು ಕಳಕಪ್ಪ ತಲಾ 88 ಮತಗಳನ್ನು ಪಡೆದಿದ್ದು, ಸಮಬಲ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಗೆಲುವು ನಿರ್ಧರಿಸಲು ಟಾಸ್  ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.

ಚುನಾವಣಾಧಿಕಾರಿ ಇಬ್ಬರು ಅಭ್ಯರ್ಥಿಗಳ ಸಮ್ಮುಖದಲ್ಲಿ ಟಾಸ್ ಹಾಕಿದ್ದು, ಇದರಲ್ಲಿ ಅಭ್ಯರ್ಥಿ ಮಹಾಂತೇಶ್ ಗೆಲುವಿನ ನಗು ಬೀರಿದ್ದಾರೆ.

ಬೂಕನಕೆರೆ ಗ್ರಾ.ಪಂನಲ್ಲಿ ಲಾಟರಿ ಮೂಲಕ ಆಯ್ಕೆ!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ತವರೂರು ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿ ಫಲಿತಾಂಶದಲ್ಲಿ ಸಮಬಲದ ಮತ ಪಡೆದಿದ ಪರಿಣಾಮ ಲಾಟರಿ ಡ್ರಾ ಮೂಲಕ ಅಭ್ಯರ್ಥಿ ಆಯ್ಕೆ ನಡೆದಿತ್ತು.

ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ತಲಾ 183 ಮತ ಪಡೆದಿದ್ದರು. ನಂತರ ಅಧಿಕಾರಿಗಳ ನಡೆಸಿದ ಲಾಟರಿ ಡ್ರಾ ಪರೀಕ್ಷೆಯಲ್ಲಿ ಜೆಡಿಎಸ್ ನ ಮಂಜುಳಾ ವಿಜೇತರಾಗುವ ಮೂಲಕ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ಸಾಣಿಕೆರೆ ಅಭ್ಯರ್ಥಿಗೆ ಲಾಟರಿ ಮೂಲಕ ಗೆಲುವು:

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯ್ತಿಯ ಅಭ್ಯರ್ಥಿಗಳಾದ ಅಂಜು ಎಂ ಹಾಗೂ ಬಿ.ಎ.ಕ್ಷಿತಿಜಾ 375 ಮತ ಪಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಅಂಜು ಎ ಲಾಟರಿ ಮೂಲಕ ಗೆಲುವು ಸಾಧಿಸಿದ್ದಾರೆ.

ಸ್ಪರ್ಧೆಯಲ್ಲಿ ತಾಯಿಗೆ ಜಯ, ಮಗನಿಗೆ ಸೋಲು!

ಬೀದರ್ ತಾಲೂಕಿನ ಚಿಮಕೋಡ್ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ತಾಯಿ ಗೆಲುವು ಸಾಧಿಸಿದ್ದು, ಮಗ ಸೋಲನ್ನನುಭವಿಸಿದ್ದಾರೆ. ಚಿಮಕೋಡ್ ನ ಖಾಜಾಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ತಾಯಿ ತುಳಜಮ್ಮ 244 ಮತ ಪಡೆದು ಜಯ ಗಳಿಸಿದ್ದಾರೆ. ಪುತ್ರ ಶಿವರಾಜ್ 255 ಮತ ಪಡೆದು ಪರಾಜಯಗೊಂಡಿದ್ದು, ಪ್ರತಿಸ್ಪರ್ಧಿ ಅನಿಲ್ 301 ಮತ ಪಡೆದು ಗೆಲುವು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next