Advertisement

ಕಾರ್ಕಳ: ವಾಲಿಬಾಲ್‌ ಆಟದ ವೇಳೆ ಹೃದಯಘಾತದಿಂದ ಯುವಕ ಸಾವು

10:44 PM Feb 26, 2023 | Team Udayavani |

ಕಾರ್ಕಳ: ಆಟದ ಮೈದಾನದಲ್ಲಿ ವಾಲಿಬಾಲ್‌ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾರ್ಕಳ ಕುಕ್ಕುಂದೂರಿನಲ್ಲಿ ನಡೆದಿದೆ. ಸಂತೋಷ (34) ಮೃತಪಟ್ಟವರು.

Advertisement

ಕುಕ್ಕುಂದೂರಿನ ದುರ್ಗಾ ಅನುದಾನಿತ ಶಾಲೆಯ ಆಟದ ಮೈದಾನದಲ್ಲಿ ಫೆ. 25ರಂದು ಸಂಜೆ ವಾಲಿಬಾಲ್‌ ಆಡಲೆಂದು ತೆರಳಿದ್ದರು. ವಾಲಿಬಾಲ್‌ ಆಟವ ವೇಳೆ ನಿಂತುಕೊಂಡಿದ್ದ ಅವರು ಕುಸಿದು ಬಿದ್ದಿದ್ದಾರೆ. ಅಸೌಖ್ಯಗೊಂಡ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪರೀಕ್ಷಿಸಿದ ವೈದ್ಯರು ಮೃತ್ತಪಟ್ಟಿದ್ದಾಗಿ ತಿಳಿಸಿದ್ದಾರೆ. ಹೃದಯಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ಉದ್ಯೋಗದಲ್ಲಿದ್ದರು. ಅಲ್ಲಿಯೂ ಅವರಿಗೆ 4 ವರ್ಷದ ಈ ಹಿಂದೆ ಲಘು ಹೃದಯಘಾತ ಸಂಭವಿಸಿದ್ದು ಬಳಿಕ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next