Advertisement

ಮುಂಡ್ಕೂರು: ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಮತಯಾಚನೆ

07:45 AM Apr 18, 2018 | |

ಬೆಳ್ಮಣ್‌:  ಕಾರ್ಕಳ ತಾಲೂಕಿನಲ್ಲಿ ಕಳೆದ 5 ವರ್ಷದ ಶಾಸಕತ್ವದ ಅವಧಿಯಲ್ಲಿ ಮಾಡಿದ  ಅಭಿವೃದ್ಧಿಗಾಗಿ ಮುಂದೆಯೂ ತನ್ನ ಗೆಲುವಿಗೆ ಮತ ನೀಡಬೇಕು  ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಮತಯಾಚನೆ ಸಂದರ್ಭ ತಿಳಿಸಿದರು.

Advertisement

ಅವರು ಸೋಮವಾರ ಮುಂಡ್ಕೂರು, ಸಂಕಲಕರಿಯ, ಸಚ್ಚೇರಿಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ತೆರಳಿ  ಮತಯಾಚನೆಗೆ ಚಾಲನೆ ನೀಡಿ  ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ನ ದುರಾಡಳಿತಕ್ಕೆ‌ ಬೇಸತ್ತ ಮತದಾರರು ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವ  ನಿಟ್ಟಿನಲ್ಲಿ  ಜನತೆ ಬಿಜೆಪಿ ಪಕ್ಷವನ್ನು  ಬೆಂಬಲಿಸಲಿದ್ದಾರೆ ಎಂದರು.

ಜಿ.ಪಂ. ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಮುಂಡ್ಕೂರು ಗ್ರಾ.ಪಂ.  ಅಧ್ಯಕ್ಷೆ  ಶುಭಾ ಪಿ. ಶೆಟ್ಟಿ,  ಮುಂಡ್ಕೂರು ಗ್ರಾ. ಪಂ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ,  ಸತ್ಯಶಂಕರ್‌ಶೆಟ್ಟಿ, ಜಯ ಶೆಟ್ಟಿ  ಪೊಸ್ರಾಲು, ಸೋಮನಾಥ ಪೂಜಾರಿ ಸಂಕಲಕರಿಯ, ಸಂದೀಪ್‌ ಶೆಟ್ಟಿ ಸಚ್ಚರಪರಾರಿ, ಜಿತೇಂದ್ರ ,  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next