Advertisement

ಕಾರ್ಕಳ : 11 ಸಾವಿರ ರೂ. ಮೌಲ್ಯದ ಅಡಿಕೆ ಕಳ್ಳತನ

08:47 PM Dec 16, 2022 | Team Udayavani |

ಕಾರ್ಕಳ: ಕಾರ್ಕಳ ಕಸಬಾದ ಸರಕಾರಿ ಆಸ್ಪತ್ರೆ ಬಳಿಯ ನಿವಾಸಿ ಮನೀರ್‌ ಅಹಮ್ಮದ್‌ ಅವರ ತೋಟದಿಂದ ಡಿ. 9ರಂದು ಹಾಗೂ ಅವರ ಸಹೋದರ ಜಹೀರ್‌ ಅಹಮ್ಮದ್‌ ಬೇಗ್‌ ಅವರ ತೋಟದಿಂದ ಡಿ. 15ರಂದು ಹೀಗೆ ಪ್ರತ್ಯೇಕವಾಗಿ ಒಟ್ಟು 11 ಸಾವಿರ ಮೌಲ್ಯದ ಅಡಿಕೆ ಕಳ್ಳತನವಾಗಿದೆ.

Advertisement

ಡಿ. 9ರಂದು ಮನೀರ್‌ ಅಹಮ್ಮದ್‌ ಅವರ ತೋಟದಿಂದ ರಾತ್ರಿ 2 ಗೋಣಿ ಚೀಲದಲ್ಲಿದ್ದ 8 ಸಾವಿರ ಮೌಲ್ಯದ ಅಡಿಕೆ ಕಳವಾಗಿತ್ತು. ತೋಟ ನೋಡಿಕೊಳ್ಳುತ್ತಿದ್ದ ಹನುಮಂತ ಹಾಗೂ ರಂಗನಾಥ ಇವರಿಬ್ಬರು ರಾತ್ರಿ ವೇಳೆ ತೋಟದ ಸಮೀಪ ಅನುಮಾಸ್ಪದವಾಗಿ ಓಡಾಡುತಿದ್ದ ರೊನಾಲ್ಡ್‌ ಡಿ’ಸೋಜಾ ಹಾಗೂ ಉಮೇಶ್‌ ಅವರನ್ನು ಹಿಡಿದು ಅಂದು ಪೊಲೀಸರಿಗೆ ಒಪ್ಪಿಸಿದ್ದರು.

ಡಿ. 15ರಂದು ಬೆಳಗ್ಗೆ ಮನೀರ್‌ರವರ ಅಣ್ಣ ಜಹೀರ್‌ ಅಹಮ್ಮದ್‌ ಬೇಗ್‌ ಅವರ ಅಡಿಕೆ ತೋಟದಿಂದ 3 ಸಾವಿರ ರೂ ಮೌಲ್ಯದ ಅಡಿಕೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next