Advertisement

ದರೋಡೆ ಗ್ಯಾಂಗ್‌ ನಡೆಸುತ್ತಿದ್ದ ಕರವೇ ಮುಖಂಡ ಅರೆಸ್ಟ್‌ 

02:01 PM Nov 20, 2017 | |

ಬೆಂಗಳೂರು: ನಗರದ ಹಲಸೂರಿನ ಜೋಗುಪಾಳ್ಯದಲ್ಲಿ ದರೋಡೆ ಗ್ಯಾಂಗ್‌ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಮುಖಂಪನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ವರುಣ್‌ ಅಲಿಯಾಸ್‌ ಚಿನ್ನಿ ಎಂದು ತಿಳಿದು ಬಂದಿದ್ದು,ಪ್ರವೀಣ್‌ ಶೆಟ್ಟಿ ಬಣದಲ್ಲಿ ಗುರುತಿಸಿಕೊಂಡಿದ್ದ.  ಹಲಸೂರಿನಲ್ಲಿ ನೈಟ್‌ ಶಿಫ್ಟ್ ಮುಗಿಸಿ ಬರುತ್ತಿದ್ದವರನ್ನುಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಎನ್ನಲಾಗಿದೆ. 

ಹಲಸೂರು ಮೆಟ್ರೋ ಸ್ಟೇಶನ್‌ ಬಳಿ  ಐಟಿ ಉದ್ಯೋಗಿಯ ದರೋಡೆಪ್ರಕರಣ ದ ತನಿಖೆವೇಳೆ ಬಲೆಗೆ ಬಿದ್ದಿದ್ದಾನೆ. 

ರಾತ್ರಿ ಉದ್ಯೋಗಿಯನ್ನು ಅಡ್ಡಗಟ್ಟಿ, ವಾಚ್‌, ಪರ್ಸ್‌, ಮೊಬೈಲ್‌ ದರೋಡೆ ಮಾಡಿ ಎಟಿಎಂನಿಂದ 4000 ರೂ ಡ್ರಾ ಮಾಡಿಸಿದ್ದ ಎನ್ನಲಾಗಿದೆ. 

ವರುಣ್‌ ತನ್ನ ಕುಕೃತ್ಯಕ್ಕೆ ನಾಲ್ವರು ಸಹಚರರನ್ನೂ ನೇಮಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

Advertisement

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next